ಡೈಲಿ ವಾರ್ತೆ : 30 ಜೂನ್ 2022

✍🏻 ಕುಮಾರ್ ನಾಯ್ಕ್ ಭಟ್ಕಳ

ಶಿವಮೊಗ್ಗ-” ವಿಶ್ವ ಹಿಂದು ಪರಿಷತ ” ಮತ್ತು ಬಜರಂಗದ ಶಿವಮೊಗ್ಗ ವತಿಯಿಂದ ಉದಯಪುರದಲ್ಲಿ ನಡೆದ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಇಂದು ಶಿಮೊಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದರ ಮೂಲಕ ಕನ್ನಯ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿಜಿಲ್ಲಾ ಅಧ್ಯಕ್ಷರು ವಾಸುದೇವ್, ಭಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ , ಸಹಸಂಚಾಲಕ ವಡಿ ವೇಲು, ಮಾತೃಶಕ್ತಿ ಜಿಲ್ಲೆ ಪ್ರಮುಖ್ ನಾಗರತ್ನ, ಸಹ ಪ್ರಮುಖ್ ಶಾರದ ಶ್ರೀಧರ್ ಮೂರ್ತಿ , ದುರ್ಗವಾಹಿನಿ ನಗರ ಪ್ರಮುಖ್ ಕಾವ್ಯ.ಎಸ್ ಮುಂತಾದವರು ಉಪಸ್ಥಿತರಿದ್ದರು.