ಡೈಲಿ ವಾರ್ತೆ : 30 ಸೆಪ್ಟೆಂಬರ್ 2022

ಕುಂದಾಪುರ: ಎಕ್ಸಲೆಂಟ್ ಪ್ರೌಢ ಶಾಲೆ ಸುಣ್ಣಾರಿ ವಿದ್ಯಾರ್ಥಿಗಳು ವೃತ್ತಮಟ್ಟದ ಅಥ್ಲೇಟಿಕ್ಸ್‍ನಲ್ಲಿ ಎರಡು ಚಿನ್ನದ ಪದಕ ಗೆದ್ದು, ತಾಲೂಕು ಮಟ್ಟಕ್ಕೆ ಆಯ್ಕೆ!

ಕುಂದಾಪುರ : ಹಾಲಾಡಿ ವೃತ್ತಮಟ್ಟದ ಅಥ್ಲೇಟಿಕ್ಸ್‍ನಲ್ಲಿ
ಎಕ್ಸಲೆಂಟ್ ಪ್ರೌಢ ಶಾಲೆ ಸುಣ್ಣಾರಿ, ಕುಂದಾಪುರದ ವಿದ್ಯಾರ್ಥಿಗಳು.ಎರಡು ಚಿನ್ನದ ಪದಕ ಪಡೆಡಿರುತ್ತಾರೆ

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮಾಸೆಬೈಲು ಇವರ ಜಂಟಿ ಆಶ್ರಯದಲ್ಲಿ ನಡೆದ ಪ್ರಾಥಮಿಕ ಶಾಲಾ ಹಾಲಾಡಿ ಸಂಯೋಜಕ ವೃತ್ತ ಮಟ್ಟದ ಕ್ರೀಡಾ ಕೂಟದಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಶಾಲೆಯ ವಿದ್ಯಾರ್ಥಿಗಳಾದ ಅಕ್ಷರ್ ಎನ್ ಶೆಟ್ಟಿ ಬಾಲಕರ ವಿಭಾಗದ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಮತ್ತು
ಸರ್ವಜಿಷ್ಣು ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರನ್ನು ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದದವರು ಹಾಗೂ ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.