ಡೈಲಿ ವಾರ್ತೆ : 30 ಸೆಪ್ಟೆಂಬರ್ 2022

ಕೋಟ ಕಂದಾಯ ನಿರೀಕ್ಷಕ ರಾಜು ಅವರಿಗೆ ಬೀಳ್ಕೊಡುಗೆ : ನೂತನ ಕಂದಾಯ ನಿರೀಕ್ಷಕರಾಗಿ ಕಾರ್ತಿಕೇಯ ಭಟ್ ಅಧಿಕಾರ ಸ್ವೀಕಾರ

ಕೋಟ : ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯ ಕಂದಾಯ ನಿರೀಕ್ಷಕರಾಗಿ‌ ಉತ್ತಮ‌ಸೇವೆ ಸಲ್ಲಿಸಿ ಎಲ್ಲರಿಂದಲೂ ಗುರುತಿಸಲ್ಪಟ್ಟಿದ್ದ ರಾಜು ಅವರಿಗೆ ಬೀಳ್ಕೊಡುಗೆ ಸಮಾರಂಭವು ಸೆ. 30 ರಂದು ಶುಕ್ರವಾರ ಸಂಜೆ ಕೋಟ ನಾಡ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ನಾಡ ಕಚೇರಿಯ ಉಪ ತಹಸೀಲ್ದಾರ್ ಭಾಗ್ಯ ಲಕ್ಷ್ಮೀ ವಹಿಸಿದ್ದರು.
ಕೋಟ ದಿಂದ ಉಡುಪಿ ಜಿಲ್ಲಾಧಿಕಾರಿ ಕಛೇರಿಗೆ ವರ್ಗಾವಣೆಗೊಂಡ ರಾಜು ಅವರನ್ನು ಸಿಬ್ಬಂದಿ ಮತ್ತು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.



ಈ ಸಂದರ್ಭ ಉಡುಪಿಯಿಂದ ಕೋಟಕ್ಕೆ ಕಂದಾಯ ನಿರೀಕ್ಷಕರಾಗಿ ಆಗಮಿಸಿದ ಕಾರ್ತಿಕೇಯ ಭಟ್ ಅವರನ್ನು ಸ್ವಾಗತಿಸಲಾಯಿತು.
ಸಮಾರಂಭದಲ್ಲಿ ಉಪ ತಹಸೀಲ್ದಾರ ಭಾಗ್ಯಲಕ್ಷ್ಮಿ, ಬ್ರಹ್ಮಾವರ ತಾಲೂಕು ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಚೆಲುವರಾಜ್ , ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ನಾಡ ಕಚೇರಿ ಸಿಬ್ಬಂದಿಗಳು, ಅಟಲ್ ಜಿ ಜನಸ್ನೇಹಿ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.