ಡೈಲಿ ವಾರ್ತೆ : 30 ಸೆಪ್ಟೆಂಬರ್ 2022

ಮಣೂರು: ಮಳಲುತಾಯಿ ದೇವಳದಲ್ಲಿ ಭಜನೆ , ವಿವಿಧ ಧಾರ್ಮಿಕ ಕಾರ್ಯಕ್ರಮ

ಕೋಟ: ಶರನ್ನವರಾತ್ರಿ ಅಂಗವಾಗಿ ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಣೂರು ಇಲ್ಲಿ ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ತಂಡದ ಅಧ್ಯಕ್ಷೆ ಕಲಾವತಿ ಅಶೋಕ್
ಇವರನ್ನು ದೇವಳದ ಅರ್ಚಕರು ಗೌರವಿಸಿದರು. ಪ್ರತಿದಿನ ಸ್ಥಳೀಯ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ದುರ್ಗಾಹೋಮ,ಚಂಡಿಕಾ ಸಪ್ತಸತಿ ಪಾರಾಯಣ

ಹೂವಿನ ಪೂಜೆ,ವಿವಿಧ ಪೂಜಾ ಕಾರ್ಯಗಳು ನೆರವೆರಿತು.
ಧಾರ್ಮಿಕ ಕಾರ್ಯಕ್ರಮವನ್ನು ವೇ ಮೂ ಪಾಂಡೇಶ್ವರ ಮಂಜುನಾಥ ಅಡಿಗ ನೇತ್ರತ್ವದಲ್ಲಿ ನಡೆಯಿತು.

ದೇವಳದ ಅಧ್ಯಕ್ಷ ಎಂ ಆರ್ ಶೆಟ್ಟಿ, ಪ್ರಮುಖರಾದ ಎಂ.ಎಸ್
ಸಂಜೀವ,ಸುರೇಶ್ ಪೂಜಾರಿ, ಸುರೇಶ್ ಶೆಟ್ಟಿ, ಸುರೇಶ್ ಕುಂದರ್, ಶೇಖರ್ ಮರಕಾಲ ಕೊಮೆ, ಪ್ರಕಾಶ್ ಶೆಟ್ಟಿ, ನರಸಿಂಹ ಪೂಜಾರಿ, ಅಶೋಕ್ ಶೆಟ್ಟಿ, ಜಯರಾಮ ಶೆಟ್ಟಿ ದೇವಸ, ರಾಜೇಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.