ಡೈಲಿ ವಾರ್ತೆ: 31 ಅಕ್ಟೋಬರ್ 2022

6.75ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಜಿ.ಕರುಣಾಕರ ರೆಡ್ಡಿ


ಹರಪನಹಳ್ಳಿ: (ವಿಜಯನಗರ ಜಿಲ್ಲೆ ): ಪಟ್ಟಣದ ಹೊರವಲಯದಲ್ಲಿರುವ ಹರಿಹರ ಕ್ಯಾಂಪ್ ಹತ್ತಿರ ಮರಿಯಮ್ಮನಹಳ್ಳಿಯಿಂದ ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆ (1 ಕಿ.ಮೀ ) 1ಕೋಟಿ 75ವೆಚ್ಚದಲ್ಲಿ ಹಾಗೂ ತಾಲೂಕಿನ ಕೆ.ಕಲ್ಲಹಳ್ಳಿ ಕ್ರಾಸ್ ಬಳಿ 5ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ. ಕರುಣಾಕರ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.


ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆಯಿಂದ ಕೆ.ಕಲ್ಲಹಳ್ಳಿ ಕ್ರಾಸ್ ಬಳಿ ಇರುವ ಡ್ಯಾಮೇಜ್ ಆದ ರಸ್ತೆ ದುರಸ್ತಿ ಕಾರ್ಯಕ್ಕೆ ಸುಮಾರು 5ಕೋಟಿ ವೆಚ್ಚದಲ್ಲಿ ಹಾಗೂ ಪಟ್ಟಣದ ಹೊರವಲಯದಲ್ಲಿರವ ಹರಿಹರ ಕ್ಯಾಂಪ್ ಹತ್ತಿರ ಮರಿಯಮ್ಮನಹಳ್ಳಿ ಇಂದ ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆ (1 ಕಿ.ಮೀ ) 1ಕೋಟಿ 75ಲಕ್ಷ ವೆಚ್ಚದಲ್ಲಿ 10ಮೀಟರ್ ಅಗಲಿಕರಣ ಮಾಡಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಹಾಗೂ ಟೌನ್ ನಲ್ಲಿಯೂ ಕೂಡಾ 12ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಆರ್.ಲೋಕೇಶ್, ಪುರಸಭೆ ಸದಸ್ಯ ಜಾವೀದ್, ಕಣಿವಿಹಳ್ಳಿ ಮಂಜುನಾಥ, ತಿಮ್ಮಣ್ಣ, ಮಹೇಶ್ ಪೂಜಾರ್, ಕೆಂಗಳ್ಳಿ ಪ್ರಕಾಶ್, ಎಂ. ಮಲ್ಲೇಶ್, ಯು.ಪಿ ನಾಗರಾಜ್, ಶ್ರೀನಿವಾಸ, ದಾದಾಪುರ ಶಿವಾನಂದ, ನೀಲಗುಂದ ಗ್ರಾಮ ಪಂಚಾಯ್ತಿ ಸದಸ್ಯರಾದ ದಡ್ಡೆಪ್ನರ ಸಂತೋಷ, ತಾಳೆದಹಳ್ಳಿ ಹನುಮಂತ, ಗ್ರಾ. ಪಂ.ಮಾಜಿ ಸದಸ್ಯರಾದ ಶಾನುಭೋಗರ ಷಣ್ಮುಖ, ಬಿ.ಜೆ.ಪಿ ಯುವ ಮೋರ್ಚಾದ ತಾಲ್ಲೂಕು ಉಪಾಧ್ಯಕ್ಷರಾದ ಮಾಳ್ಗಿ ತಿಮ್ಮೇಶ್ ತಾಳೆದಹಳ್ಳಿ ತಾಂಡದ ಶಿಲ್ಯಾನಾಯ್ಕ್, ಯಂಕ ನಾಯ್ಕ್, ಶಾಂತಿಬಾಯಿ, ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಕಾಶ್ ನಾಯ್ಕ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಹಡಗಲಿ ಹೊನ್ನಪ್ಪ ಸೇರಿದಂತೆ ಮತ್ತಿತರು ಇದ್ದರು.