ಡೈಲಿ ವಾರ್ತೆ : 12 ಮೇ 2022

ಆಂಧ್ರಪ್ರದೇಶ : ವಿಶಾಖಪಟ್ಟಣದ ಮಧುರವಾಡದ ಮದುವೆ ಮನೆಯಲ್ಲಿ ಮಹಾ ದುರಂತವೊಂದು ನಡೆದಿದೆ. ತಾಳಿ ಕಟ್ಟಿಸಿಕೊಂಡು ಹೊಸ ಜೀವನಕ್ಕೆ ಕಾಲಿಡಲು ಅಣಿಯಾಗಿದ್ದಯುವತಿ ಹಠಾತ್ತನೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ನಗರದ ಅರಮನೆಯಲ್ಲಿ ಬುಧವಾರ ರಾತ್ರಿ ನಾಗೋಟಿ ಶಿವಾಜಿ ಹಾಗೂ ಸೃಜನ ಎಂಬ ಜೋಡಿಯ ವಿವಾಹಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪುರೋಹಿತರು ವೇದ ಮಂತ್ರಗಳ ನಡುವೆ ಜೀರಿಗೆ ಬೆಲ್ಲವನ್ನು ಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದರು. ಇನ್ನೇನು ಹಸೆಮಣೆ ಏರಬೇಕು ಎನ್ನುವಷ್ಟರಲ್ಲಿ ವಧು ಹಠಾತ್ತನೆ ಕುಸಿದು ಬಿದ್ದಿದ್ದಾಳ. ಕೂಡಲೇ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದರೂ, ಅಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿದೆ. ಇದರೊಂದಿಗೆ ಸಂತಸದಲ್ಲಿ ಇದ್ದ ಮದುವೆ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಕಳೆದ ಎರಡು ದಿನಗಳಿಂದ ವಧು ಸುಸ್ತಾಗಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ. ಆದರೆ ಪ್ರಾಣಹಾನಿ ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.