ಡೈಲಿ ವಾರ್ತೆ : 30 ಮೇ 2022

✍🏻 ಕುಮಾರ್ ನಾಯ್ಕ್ ಭಟ್ಕಳ

ಹೊನ್ನಾವರ- ಹೊನ್ನಾವರ ತಾಲೂಕಿನ ಮಂಕಿ ಚಿತ್ತಾರ ನಿವಾಸಿಗಳಾದ ಶ್ರೀಮತಿ ಸೀತಾ ಮತ್ತು ರಾಮಚಂದ್ರ ಶೇಟ್ ಇವರ ಪುತ್ರ ದೀಪಕ್ ಶೇಟ್ ಅವರು, ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಪೋಲೀಸ್ ಸೇವೆ ಸೇರಿದಂತೆ ಭಾರತ ಸರ್ಕಾರದ ಉನ್ನತ ನಾಗರಿಕ ಸೇವೆಗಳಿಗೆ ನೇಮಕಾತಿಗಾಗಿ ನಡೆಸಿದ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಷನ್ (UPSC) ನಡೆಸಿದ ಭಾರತದಲ್ಲಿ ಸಿವಿಲ್ ಸರ್ವಿಸಸ್ ಎಕ್ಸಾಮಿನೇಷನ್ (CSE) ರಾಷ್ಟ್ರವ್ಯಾಪಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 311 ರ್ಯಾಂಕ್ ಪಡೆದು ಉತ್ತೀರ್ಣರಾಗಿರುತ್ತಾರೆ. ಇದು ನನಗೆ ಅತ್ಯಂತ ಹೆಮ್ಮೆಯ ಸಂಗತಿ ಆಗಿದೆ ಎಂದು ಭಟ್ಕಳ್ -ಹೊನ್ನಾವರ ಶಾಸಕ ಸುನೀಲ್ ನಾಯ್ಕ ತಿಳಿಸಿದ್ದಾರೆ ಮತ್ತು ಇವರ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ.