ಡೈಲಿ ವಾರ್ತೆ : 01 ಆಗಸ್ಟ್ 2022

ವಿದ್ಯಾಧರ ಮೊರಬಾ ಅಂಕೋಲಾ


ಅಂಕೋಲಾ : ಹಾರವಾಡ ಗ್ರಾ ಪಂ. ಮಾಜಿ ಅಧ್ಯಕ್ಷ ಹಾಗೂ ಮೀನುಗಾರ ಮುಖಂಡ ರಾಮ ಹನುಮಟ್ಟಿ ಕರ (77) ಸ್ವಹೃಹದಲ್ಲಿ ಸೋಮವಾರ ಮುಂಜಾನೆ ನಿಧನಗೊಂಡರು.

ಇವರಿಗೆ ಗ್ರಾ ಪಂ. ಸದಸ್ಯ ಸಂತೋಷ ಹನುಮಟ್ಟಿಕರ ಸೇರಿದಂತೆ ಮೂವರು ಪುತ್ರರಿದ್ದಾರೆ.
ಜಿಪ.ಮಾಜಿ ಅಧ್ಯಕ್ಷ ರಮಾನಂದ ನಾಯಕ, ಪ್ರಮುಖರಾದ ಪಾಂಡುರಂಗ ಗೌಡ, ಮೀನುಗಾರ ಮುಖಂಡರಾದ ಹೂವಾ ಖಂಡೇಕರ್, ರಾಜು ಹರಿಕಂತ್ರnಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.

ಸಂತಾಪ : ಮಾಜಿ ಶಾಸಕರಾದ ಸತೀಶ ಕೆ.ಸೈಲ್, ಕೆ.ಎಚ್.ಗೌಡ, ತಾಪಂ.ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಜಿಪಂ.ಮಾಜಿ ಸದಸ್ಯ ವಿನೋದ ನಾಯಕ ಬಾಸಗೋಡ, ಮೀನುಮಾರಾಟ ಪೆಡರೇಷನ್ ಜಿಲ್ಲಾಧ್ಯಕ್ಷ ರಾಜು ತಾಂಡೇಲ್ ಕಾರವಾರ, ಮೀನುಗಾರರ ಪ್ರಮುಖರಾದ ಹರಿಹರ ಹರಿಕಾಂತ ಹಿಲ್ಲೂರು,
ಹನುಮಾ ಹರಿಕಂತ್ರ ಮಾಸ್ತಿಕಟ್ಟಾ ಸಂತಾಪ ಸೂಚಿಸಿದ್ದಾರೆ.