ಡೈಲಿ ವಾರ್ತೆ : 01 ಸೆಪ್ಟೆಂಬರ್ 2022

ಉಳ್ಳಾಲ: ಯುವಕನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ…!

ಮಂಗಳೂರು : ಅವಾಚ್ಯ ಶಬ್ದಗಳಿಂದ ನಿಂದಿಸಿ‌ ಯುವಕ‌ನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳೂರು ನಗರದ ಉಳ್ಳಾಲ‌ದಲ್ಲಿ‌ ನಡೆದಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ. ಮಹಮ್ಮದ್ ಇರ್ಷಾದ್, ಹಲ್ಲೆಗೊಳಗಾದ ಯುವಕ. ಮಹಮ್ಮದ್ ಇರ್ಷಾದ್ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ನಿನ್ನೆ ರಾತ್ರಿ ಮಹಮ್ಮದ್ ಇರ್ಷಾದ್ ಕೋಟೆಪುರದ ಫಿಶ್ ಮಿಲ್ ಫ್ಯಾಕ್ಟರಿಯಲ್ಲಿ ಅನ್ ಲೋಡ್ ಮಾಡುತ್ತಿದ್ದಾಗ ಅಲ್ಲಿಗೆ ಬಂದ ರಾಝಿಕ್ ಮತ್ತು ಕಬೀರ್ ಎಂಬುವವರು ಇರ್ಷಾದ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಟ್ಟೆ ಹರಿದು ತಲೆ, ತೋಳು ಮತ್ತು ಕೈಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.


ದೂರಿನಲ್ಲಿ ಮುಂದೆ ನನಗೆ ಬೆದರಿಕೆ ಇದೆ ಆದ್ದರಿಂದ ಅವರು ತೊಂದರೆ ಮಾಡುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.