ಡೈಲಿ ವಾರ್ತೆ: 22 ಅಕ್ಟೋಬರ್ 2022

ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಡಾ. ಎಸ್. ಎಂ. ರಷೀದ್ ಹಾಜಿಯವರಿಗೆ ಸನ್ಮಾನ

ಮಂಗಳೂರು : ಇಲ್ಲಿನ ಕಂಕನಾಡಿ ರಹ್ಮಾನಿಯಾ ಜುಮಾ ಮಸೀದಿಯ ಅಧೀನದ ಮದ್ರಸ ವಿದ್ಯಾರ್ಥಿಗಳಿಗೆ ಮೀಲಾದುನ್ನಬಿ ಪ್ರಯುಕ್ತ ಹಮ್ಮಿಕೊಂಡ ಸ್ಪರ್ಧಾ ಕಾರ್ಯಕ್ರಮದಲ್ಲಿ ಡಾ.ಎಸ್. ರಾಧಾಕೃಷ್ಣ ಶಿಕ್ಷಕರ ಸಂಘದ ಶಿಫಾರಸ್ಸಿನಂತೆ ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೇರಿಕ ವತಿಯಿಂದ ಗೌರವ ಡಾಕ್ಟರೇಟ್ ಪುರಸ್ಕ್ರತರಾಗಿರುವ ಡಾ. ಎಸ್. ಎಂ. ರಶೀದ್ ಹಾಜಿ ಅವರನ್ನು ಸನ್ಮಾನಿಸಲಾಯಿತು.

ರಹ್ಮಾನಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಪರವಾಗಿ ಯೆನಪೋಯ ಗ್ರೂಪ್ ನಿರ್ದೇಶಕರಾದ ವೈ. ಮಹಮ್ಮದ್ ಕುಂಞಯವರು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಸೀದಿಯ ಖತೀಬ್ ಅಬ್ದುಲ್ ರಹಿಮಾನ್, ಮದ್ರಸ ಪ್ರಾಧ್ಯಾಪಕ ಅಕ್ಬರ್ ಮದನಿ, ಸಮಿತಿ ಕಾರ್ಯದರ್ಶಿ ಅಬ್ದುಲ್ ಸಮದ್ ಸದಸ್ಯ ಸಾಜಿದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.