ಡೈಲಿ ವಾರ್ತೆ: 24 ಅಕ್ಟೋಬರ್ 2022
“ವರನಿಗೆ ಕೈ ಕೊಟ್ಟ ವಧು” ಮದುವೆಯ ಮರುದಿನವೇ ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾದ ಕಿಲಾಡಿ ವಧು.!
ಉತ್ತರಪ್ರದೇಶ;ಮದುವೆಯ ಮರುದಿನವೇ ಗಂಡನ ಮನೆಯಲ್ಲಿದ್ದ ಹಣ,ಚಿನ್ನಾಭರಣ ಎಗರಿಸಿಕೊಂಡು ವಧು ಪರಾರಿಯಾಗಿರುವ ಘಟನೆ ಕಾನ್ಪುರ ಜಿಲ್ಲೆಯ ಬಿಲ್ಹಾಪುರದಲ್ಲಿ ನಡೆದಿದೆ.
ತಕ್ತಾಲಿ ಗ್ರಾಮದ ಇಬ್ಬರು ಜಡೇಪುರ ಗ್ರಾಮದ ನಿವಾಸಿ ಅರವಿಂದ್ ಎಂಬಾತನಿಗೆ ಮದುವೆ ನಿಗದಿ ಮಾಡಲು 70 ಸಾವಿರ ಹಣ ಪಡೆದು ವಧುವನ್ನು ಪರಿಚಯಿಸಿದ್ದರು ಅರವಿಂದ್ ಗೆ ಗಯಾದ ದೇಗುಲವೊಂದರಲ್ಲಿ ಯುವತಿಯೊಂದಿಗೆ ವಿವಾಹ ಮಾಡಲಾಗಿದೆ. ವಿವಾಹ ಸಂಭ್ರಮದಿಂದಲೇ ನಡೆದಿದೆ.
ಮದುವೆಯ ಮರುದಿನ ಹಣ ನಗದು ಮಾತ್ರವಲ್ಲದೇ ಗಂಡನ ಮನೆಯಲ್ಲಿ ಹಲವು ವಸ್ತುಗಳನ್ನು ಎಗರಿಸಿಕೊಂಡು ಕಿಲಾಡಿ ವಧು ಪರಾರಿಯಾಗಿದ್ದಾಳೆ.
ಬಳಿಕ ತನ್ನ ಗಂಡನಿಗೆ ಕರೆ ಮಾಡಿ ತನ್ನನ್ನು ಇನ್ನು ಮುಂದೆ ಸಂಪರ್ಕಿಸದಂತೆ ಹೇಳಿದ್ದಾರೆ.
ನಾನು ನಿನ್ನನ್ನು ಪ್ರೀತಿಸುವುದಿಲ್ಲ. ನನಗೆ ಕರೆ ಮಾಡಬೇಡ ಎಂದು ಮೆಸೇಜ್ ಮಾಡಿದ್ದಾಳೆ.
ಘಟನೆ ಬಳಿಕ ವರನ ಕಡೆಯವರು ಕಂಗಾಲಾಗಿದ್ದಾರೆ.
ವಧು ನಗದಿನ ಜೊತೆ ಆಕೆಗೆ ಮದುವೆಗೆ ನೀಡಲಾಗಿದ್ದ ಚಿನ್ನಾಭರಣ ಹಾಗೂ ಬಟ್ಟೆಯೊಂದಿಗೆ ಪರಾರಿಯಾಗಿದ್ದಾಳೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.
ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರನ್ನು ಕೂಡಲೇ ಬಂಧಿಸಲಾಗುವುದು ಎಂದು ಬಿಲ್ಹಾಪುರ ಠಾಣೆಯ ಮುಖ್ಯಸ್ಥ ಜಗದೀಶ್ ಪಾಂಡೆ ತಿಳಿಸಿದ್ದಾರೆ.