ಡೈಲಿ ವಾರ್ತೆ: 30 ಅಕ್ಟೋಬರ್ 2022

ಮಲೆನಾಡಲ್ಲಿ ಶುರುವಾದ ಹೋರಿ ಬೆದರಿಸುವ ಹಬ್ಬ: ರೊಚ್ಚಿಗೆದ್ದ ಗೂಳಿ ದಾಳಿಗೆ ಇಬ್ಬರು ದಾರುಣ ಸಾವು

ಶಿವಮೊಗ್ಗ: ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ಹೋರಿ ಓಡಿಸುವ ಸ್ಪರ್ಧೆ ವೇಳೆ ಹೋರಿ ಗುದ್ದಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದಿದೆ.

ಶಿಕಾರಿಪುರ ತಾಲೂಕಿನ ಪ್ರಶಾಂತ ಕುಮಾರ್ (36) ಮತ್ತು ಸೊರಬ ತಾಲೂಕಿನ ಆದಿ(20) ಮೃತಪಟ್ಟ ದುರ್ದೈವಿಗಳು.

ಪ್ರಶಾಂತ ಕುಮಾರ ಪೇಂಟಿಗ್ ಕೆಲಸ ಮಾಡುತ್ತಿದ್ದು, ಸ್ಪರ್ಧೆ ನೋಡಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಹಾಗೂ ಆದಿ ಸೊರಬ ತಾಲೂಕಿನ ಜಡೆ ಗ್ರಾಮದ ಚಗಟೂರಿನ ಯುವಕನಾಗಿದ್ದು, ಸ್ಪರ್ಧೆ ಮುಗಿದು ಎಲ್ಲರೂ ಮರಳುವ ವೇಳೆ ಆತನ ಮೇಲೆ ಹೋರಿ ದಾಳಿ ಮಾಡಿ ಆತ ಸಾವನ್ನಪ್ಪಿದ್ದಾನೆ.