ಡೈಲಿ ವಾರ್ತೆ: 15 ನವಂಬರ್ 2022

ಅಬುಧಾಬಿ: ಕಟ್ಟಡದ ಮೇಲಿನಿಂದ ಬಿದ್ದು ಕೇರಳದ ಬಾಲಕ ಮೃತ್ಯು

ಕೇರಳ: ಅಬುಧಾಬಿಯಲ್ಲಿ ಕಟ್ಟಡದ ಮೇಲಿಂದ ಬಿದ್ದು ಮಲಯಾಳಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಪತ್ತನಂತಿಟ್ಟ ಪಂದಳಂ ಮೂಲದ ಶಿವಪ್ರಶಾಂತ್ ಮತ್ತು ಗೋಮತಿ ಪೆರುಮಾಳ್ ದಂಪತಿಯ ಪುತ್ರ ಆರ್ಯನ್ ಶಿವ ಪ್ರಶಾಂತ್ ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ನಿಧನರಾದರು.

16 ವರ್ಷ ಆರ್ಯನ್ ಅಬುಧಾಬಿಯ ಸನ್‌ರೈಸ್ ಇಂಗ್ಲಿಷ್ ಖಾಸಗಿ ಶಾಲೆಯಲ್ಲಿ ಓದುತ್ತಿದ್ದರು.ಈತ 10ನೇ ತರಗತಿ ವಿದ್ಯಾರ್ಥಿ.ಅವಘಡ ಹೇಗೆ ಸಂಭವಿಸಿತು ಎಂಬುದು ಸ್ಪಷ್ಟವಾಗಿಲ್ಲ.ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಹೇಗೆ ಕಟ್ಟದ ಮೇಲಿನಿಂದ ಬಾಲಕ ಬಿದ್ದಿದ್ದಾನೆ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.