ಡೈಲಿ ವಾರ್ತೆ : 30 ಮೇ 2022

ಉಡುಪಿ : ಉಡುಪಿ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ವೃದ್ಧರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದು ಸಂಭವಿಸಿದೆ. ವಿಷಯ ತಿಳಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಉಡುಪಿ ವಿಷ್ಣು ಫ್ಲವರ್ ಸ್ಟಾಲಿನ ರಾಕೇಶ್ ಅವರ ಸಹಕಾರದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ವೃದ್ದನನ್ನು ಸಾಗಿಸಿದ್ದರು.

ಪರೀಕ್ಷಿಸಿದ ವೈದ್ಯರು, ಅದಾಗಲೇ ವೃದ್ಧರು ಮೃತಪಟ್ಟಿರುವ ಬಗ್ಗೆ ಧೃಡಿಕರಿಸಿದರು. ವೃದ್ಧರ ಹೆಸರು, ವಿಳಾಸ ತಿಳಿದುಬಂದಿಲ್ಲ. ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.