ಡೈಲಿ ವಾರ್ತೆ : 23 ಸೆಪ್ಟೆಂಬರ್ 2022

ವಿಟ್ಲ:ಬೈಕ್ ಹಾಗೂ ಪಿಕಪ್ ನಡುವೆ ರಸ್ತೆ ಅಪಘಾತ : ಬೈಕ್ ಸವಾರ, ಹವ್ಯಾಸಿ ಗಾಯಕ ಬದಿಯಡ್ಕ ನಿವಾಸಿ ಮೃತ್ಯು

ವಿಟ್ಲ: ಪಿಕಪ್ ವಾಹನವೊಂದು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಯುವ ಗಾಯಕ, ಬಿಜೆಪಿ ಕಾರ್ಯಕರ್ತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕೇಪುವಿನಲ್ಲಿ ನಡೆದಿದೆ.

ಬದಿಯಡ್ಕ ನಿವಾಸಿ ಸಂದೇಶ್ (33) ಮೃತ ದುರ್ಧೈವಿ ಯುವಕ.

ಸಂದೇಶ್ ವೃತ್ತಿಯಲ್ಲಿ ವಾಹನ ಚಾಲಕನಾಗಿದ್ದು, ಹವ್ಯಾಸಿ ಗಾಯಕನಾಗಿಯೂ ಮಿಂಚುತ್ತಿದ್ದ ಯುವಕ. ಬಿಜೆಪಿ ಕಾರ್ಯಕರ್ತನಾಗಿ ಗುರುತಿಸಿ
ಕೊಂಡಿದ್ದ ಈತ ಇಂದು ಮಧ್ಯಾಹ್ನ ಅಂದಾಜು ಮೂರು ಗಂಟೆಯ ವೇಳೆಗೆ ವಿಟ್ಲ ಕಡೆಯಿಂದ ಬೈಕ್ ನಲ್ಲಿ ಬದಿಯಡ್ಕ ಕಡೆಗೆ ಪ್ರಯಾಣಿಸುವ ವೇಳೆ ಎದುರಿನಿಂದ ಅತೀ ವೇಗದಿಂದ ಮತ್ತು ಅಜಾಕರುಕತೆಯಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ಎಚ್.ನಾಗರಾಜ್, ಎಸ್.ಐ. ಸಂದೀಪ್, ಎಚ್.ಸಿ.ಜಯರಾಮ್ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದಾರೆ.