ಡೈಲಿ ವಾರ್ತೆ : 30 ಸೆಪ್ಟೆಂಬರ್ 2022

ಕಾಪು : ಶೋಭಾಕ್ಕನವರ ಜೊತೆ ಮಹಿಳಾಮೋರ್ಚಾ ತಂಡ ಸೆಲ್ಫಿ : ಮಿಥುನ್ ರೈ ಹೇಳಿಕೆಗೆ ತಿರುಗೇಟು.!

ಕಾಪು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಯವರ ಜೊತೆ ಕಾರ್ಯಕರ್ತರು ಸೆಲ್ಫಿ ತೆಗೆಯುವುದರೊಂದಿಗೆ ಮಿಥುನ್ ರೈ ಅವರ ಹೇಳಿಕೆಗೆ ತಿರುಗೇಟು ನೀಡಿದ ಮಹಿಳಾಮೋರ್ಚಾ ತಂಡ.

ಶೋಭಾ ಕರಂದ್ಲಾಜೆ ಜೊತೆ ಉಡುಪಿ ಕ್ಷೇತ್ರದಲ್ಲಿ ಫೋಟೋ ತೆಗೆದವರಿಗೆ 5000 ಬಹುಮಾನ ನೀಡುವುದಾಗಿ ಕಾಂಗ್ರೆಸ್ ನಾಯಕ ಮಿಥುನ್ ರೈ ಘೋಷಿಸಿದ್ದರು.

ಸೇವಾ ಪಾಕ್ಷಿಕದ ಅಂಗವಾಗಿ ಕಾಪು ಪೇಟೆಯಲ್ಲಿ ಖಾದಿ ಮೇಳವನ್ನು ಉದ್ಘಾಟಿಸಿದ ನಂತರ ಮಹಿಳಾಮೋರ್ಚಾ, ಯುವಮೋರ್ಚಾ ಕಾರ್ಯಕರ್ತರು ಸಚಿವೆಯೊಂದಿಗೆ ಸೆಲ್ಫಿ ತೆಗೆಯಲು ಮುಗಿದುಬಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಜನಪರ ಕೆಲಸ ಮಾಡುತ್ತಿರುವ ಸರಳ ಸಂಸದೆ, ಸಚಿವರ ಜೊತೆ ಸೆಲ್ಫಿ ತೆಗೆದರೇ ಬಹುಮಾನ ನೀಡುವುದಾಗಿ ಕಾಂಗ್ರೆಸಿನ ಮಿಥುನ್ ರೈ ಹೇಳಿದ್ದಾರೆ. ಹೀಗಾಗಿ ಶೋಭಾಕ್ಕನವರ ಜೊತೆ ಮಹಿಳಾಮೋರ್ಚಾದ ತಂಡ ಸೆಲ್ಫಿ ತೆಗೆದು ಮಿಥುನ್ ರೈ ಅವರ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂದರು.