ನ್ಯೂಸ್ ✒️ಓಂಕಾರ ಎಸ್ ವಿ ತಾಳಗುಪ್ಪ

ಶಿವಮೊಗ್ಗ ಜಿಲ್ಲಾ ಸಾಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ದಿನ ಸಾಗರ ನಿವಾಸಿಯೊಬ್ಬರ ಹೊಟ್ಟೆಯಲ್ಲಿ ಸುಮಾರು 08 ರಿಂದ 10 ಕೆಜಿ ಬಾರೀ ಗಾತ್ರದ ಗೆಡ್ಡೆಯನ್ನೂ ವೈದ್ಯರಾದ ಶ್ರೀ ನಾಗೇಂದ್ರಪ್ಪ ರವರು ಸುಮಾರು 2 ರಿಂದ 3 ತಾಸು ನೆಡೆಸಿದ ಯಶಸ್ವಿ ಶಸ್ತ್ರಚಿಕೆತ್ಸೆಯಿಂದ ಗೆಡ್ಡೆಯನ್ನೂ ದೇಹದಿಂದ ಹೊರತೆಗೆದಿದ್ದರು.

ಈ ಶಸ್ತ್ರಚಿಕಿತ್ಸೆ ಯಲ್ಲಿ ವೈದ್ಯರಾದ ಶ್ರೀ ನಾಗೇಂದ್ರಪ್ಪ ರವರ ಜೊತೆಗೆ ಅರವಳಿಕೆ ವೈದ್ಯರು ( ) ಶ್ರೀಮತಿ ಸುಷ್ಮಾ, ನರ್ಸ್ ಗಳಾದ ಶ್ರೀಮತಿ ಸುಷ್ಮಾ & ಶ್ರೀಮತಿ ರೋಹಿಣಿ ಹಾಗೂ ಡಿ ದರ್ಜೆ ನೌಕರರಾದ ಶ್ರೀ ಚಂದ್ರು ರವರು ಕೂಡ ಕೈಜೋಡಿಸಿದ್ದಾರೆ, ಮಹಿಳೆಯ ಅರೋಗ್ಯ ಸ್ಥಿತಿಯು ಅರೋಗ್ಯ ಕರವಾಗಿರುತ್ತದೆ.