ವರದಿ : ಗಣೇಶ್ ಆಚಾರ್ಯ ಶಿರಿಸಿ

ಶಿರಸಿ: ಇಲ್ಲಿನ ಅಕ್ಷಯ ಗಾರ್ಡನ್ ನಲ್ಲಿ ಕೋವಿಡ್ ನಿಯಮ ಮೀರಿ ಜನ ಸೇರಿದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಿಂದ ದಾಳಿ ನಡೆಸಿದ ಘಟನೆ ನಡೆದಿದೆ.


ಖಾಸಗಿ ವ್ಯಕ್ತಿಯೊಬ್ಬರ ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮ ಮೀರಿ ಜನ ಸೇರಿಸಲಾಗಿತ್ತು. ಸುಮಾರು 300 ಕ್ಕೂ ಹೆಚ್ಚಿನ ಜನ ಸೇರಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಷಯ ತಿಳಿದ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿ ಜಂಟಿಯಾಗಿ ದಾಳಿ ನಡೆಸಿ ಕಾರ್ಯಕ್ರಮ ಬಂದ್ ಮಾಡಿಸಲಾಯಿತು.

ಈ ಕಾರ್ಯಕ್ರಮದ ಬಗ್ಗೆ ಪೂರ್ವ ಮಾಹಿತಿ ಇದ್ದು ಬಾಡಿಗೆ ನೀಡಿದ ಅಕ್ಷಯ ಗಾರ್ಡನ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ.