ಡೈಲಿ ವಾರ್ತೆ: 30 ಅಕ್ಟೋಬರ್ 2022

ಚಿಕ್ಕಮಗಳೂರು: ಹೃದಯಾಘಾತದಿಂದ ಮೃತಪಟ್ಟ ಶಾಲಾ ಬಾಲಕಿ: ನೇತ್ರದಾನಕ್ಕೆ ಮುಂದಾದ ಪೋಷಕರ



ಮೂಡಿಗೆರೆ: ಹೃದಯಾಘಾತದಿಂದ ಶಾಲಾ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.

ಮೂಡಿಗೆರೆ ನಗರದ ಬೆಥನಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಮೃತ ಬಾಲಕಿ. ನಿನ್ನೆ ರಾತ್ರಿ 7.30 ರ ವೇಳೆಗೆ ಹೃದಯಾಘಾತ ಸಂಭವಿಸಿದೆ. ಮೃತಳ ಪೋಷಕರು ಮಹಾರಾಷ್ಟ್ರ ಮೂಲದವರಾಗಿದ್ದು ಬಾಲಕಿಯ ಅಂತ್ಯಕ್ರಿಯೆ ಮಹಾರಾಷ್ಟ್ರದಲ್ಲಿ ನಡೆಯಲಿದೆ ಎಂಬುದಾಗಿ ಪೋಷಕರು ತಿಳಿಸಿದ್ದಾರೆ.

ಮಗಳ ವಿರಹದ ನೋವಿನ ನಡುವೆಯೂ ಬೇರೊಬ್ಬರ ಬಾಳು ಬೆಳಕಾಗಲಿ ಎಂಬ ಸಂಕಲ್ಪ ಕೈಗೊಂಡ ಹೆತ್ತವರು ಆಕೆಯ ಎರಡು ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ.

ವೈಷ್ಣವಿಯ ವಿರಹವು ಕುಟುಂಬಿಕರ ಸಹಿತ ಸ್ನೇಹಿತರು, ಶಾಲಾ ಶಿಕ್ಷಕರು ಮತ್ತು ಸಾರ್ವಜನಿಕರಲ್ಲಿ ಅತೀವ ದುಃಖವನ್ನುಂಟು ಮಾಡಿದೆ.

ಹಾಸನದ ಮೆಡಿಕಲ್ ಕಾಲೇಜಿನ Eye bank ವೈದ್ಯರ ತಂಡದ ಸಹಾಯದಿಂದ ತೆಗೆಯಲ್ಪಟ್ಟ ಆಕೆಯ ಕಣ್ಣುಗಳು ಬೇರೆಯವರ ಬಾಳಲ್ಲಿ ಬೆಳಕಾಗಲಿದೆ.