✒️ಓಂಕಾರ ಎಸ್ ವಿ ತಾಳಗುಪ್ಪ

ಸಾಗರ: ತಾಲೂಕಿನ ಕರೂರು ಹೋಬಳಿಯಲ್ಲಿನ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದ್ದು ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಕರೂರು ಹೋಬಳಿಯಲ್ಲಿನ 48 ಶಾಲೆಗಳಲ್ಲಿ ಈಗಾಗಲೇ 3 ಶಾಲೆಗಳು ಮುಚ್ಚಿದ್ದು ಉಳಿದ 45 ಶಾಲೆಗಳಿಗೆ 51 ಶಿಕ್ಷಕರಿದ್ದು ಸರಿಯಾದ ಸಮಯಕ್ಕೆ ಶಿಕ್ಷಣ ಬೋಧನೆ ಸಮರ್ಪಕವಾಗಿ ನೀಡಲಾಗದೆ ಶಿಕ್ಷಕರು ಹೈರಾಣಾಗಿದ್ದಾರೆ.

ಈಗಾಗಲೇ ಶಿಕ್ಷಕರಿಗೆ ಕಚೇರಿ ಕೆಲಸ. ಚುನಾವಣೆ. ಮಧ್ಯಾಹ್ನ ಬಿಸಿಯೂಟದ ನಿರ್ವಹಣೆ. ಬ್ಯಾಂಕ್. ಇನ್ನಿತರ ಹೆಚ್ಚುವರಿ ಹೊರೆಯಿಂದ ಇರುವ ಪಠ್ಯ ಮುಗಿಸಲು ಸಾಧ್ಯವಿಲ್ಲದಂತಾಗಿದೆ.

ಈ ಭಾಗಕ್ಕೆ ಅಗತ್ಯ ಶಿಕ್ಷಕರನ್ನು ಒದಗಿಸುವಂತೆ ಕಳೆದೊಂದು ವರ್ಷದಿಂದ ಈ ಭಾಗದ ಶಾಲಾಭಿವೃದ್ಧಿ ಸಮಿತಿಗಳು ಗ್ರಾಮ ಪಂಚಾಯಿತಿ ಸದಸ್ಯರು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಹಲವು ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಲು ಹಿಂಜರಿಯುವ ಘಟನೆಗಳು ಇತ್ತೀಚೆಗೆ ನಡೆದಿದೆ ಇದು ಹೀಗೆ
ಮುಂದುವರೆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇನ್ನಷ್ಟು ಸುಲಿಗೆ ಮಾಡಲು ಅನುಕೂಲ ಕಲ್ಪಿಸಿದಂತಾಗುದರಲ್ಲಿ ಯಾವುದೇ ಅನುಮಾನವಿಲ್ಲ.



ಶಿಕ್ಷಕರ ಕೊರತೆ ನೀಗಿಸುವಂತೆ ಇದೇ ತಿಂಗಳ ಜನವರಿ 14ರಂದು ಈ ಭಾಗದ ಜನಪ್ರತಿನಿಧಿಗಳ ನೀಯೋಗ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನೀಯೋಗ ಜನವರಿ 20ರ ಗಡುವು ಮುಗಿದ ಹಿನ್ನೆಲೆಯಲ್ಲಿ ಇಂದು ಬ್ಯಾಕೋಡು ವ್ಯಾಪ್ತಿಯ ಹೊಸಕೊಪ್ಪದಲ್ಲಿ ಸುದ್ದಿಗೋಷ್ಠಿ ನೆಡೆಸಿದ ಈ ಭಾಗದ ಜನಪ್ರತಿನಿಧಿಗಳ ನೀಯೋಗವು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಕಳೆದ ಒಂದು ವರ್ಷದಿಂದ ಶಿಕ್ಷಕರಿಲ್ಲದೆ ನಮ್ಮ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಕೋವಿಡ್ ನಿಂದ ಸರಿಯಾಗಿ ಶಾಲೆಗಳು ನೆಡೆಯುತ್ತಿರಲಿಲ್ಲ ಸದ್ಯ ಶಾಲೆಗಳು ಪುನರಾರಂಭಗೊಂಡು ಒಂದೆರಡು ತಿಂಗಳಾಗಿದ್ದು ಕನಿಷ್ಠ ಶಿಕ್ಷಕರು ಇಲ್ಲದೇ ಹೋದರೆ ಮಕ್ಕಳ ಶಿಕ್ಷಣ ಗಗನ ಕುಸುಮವಾಗಲಿದೆ ಎಂದರು. ಶಾಸಕರು ಮಧ್ಯ ಪ್ರವೇಶಿಸಿ ಈ ಭಾಗದ ಶಾಲೆಗಳಿಗೆ ಬೇಕಿರುವ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ
ಜನವರಿ 26ರಂದು ಈ ಭಾಗದ ಎಲ್ಲಾ ಶಾಲೆಗಳನ್ನು ಬಂದ್ ಮಾಡಿ ಸುಮಾರು 70ಕ್ಕೂ ಅಧಿಕ ಮಹಿಳಾ ಹಾಗೂ ಸ್ವಸಹಾಯ ಸಂಘಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗುದು ಎಂದರು.


ಈ ಸಂಧರ್ಭದಲ್ಲಿ ಮಾಜಿ ಕೆಡಿಪಿ ಸದಸ್ಯ ದೇವರಾಜ್ ಕಪ್ಪದೂರು ಎಸ್ ಎಸ್ ಭೋಗ್ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ ಹಾಬಿಗೆ. ಅಧ್ಯಕ್ಷರಾದ ಮಂಜುನಾಥ್ ಕೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಘುಪತಿ ನೇರಿಗೆ. ಇನ್ನಿತರರು ಉಪಸ್ಥಿತರಿದ್ದರು.

ಒಂದು ವರ್ಷದಿಂದ ಈ ಬಗ್ಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.
ಅವ್ಯವಸ್ಥೆ ವಿರುದ್ಧ ಜನವರಿ 26ರಂದು ಪ್ರತಿಭಟನೆ ನಡೆಸಲಾಗುವುದು.

ರಾಮಚಂದ್ರ ಹಾಬಿಗೆ.
ಗ್ರಾಮ ಪಂಚಾಯಿತಿ ಸದಸ್ಯರು.
ಎಸ್ ಎಸ್ ಭೋಗ್.



ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಸದ್ಯಕ್ಕೆ ಈ ಭಾಗಕ್ಕೆ ಅಗತ್ಯ ಅತಿಥಿ ಶಿಕ್ಷಕರನ್ನು ಈ ಭಾಗಕ್ಕೆ ನೀಡಲಾಗಿದೆ.

ಬಿಂಬ ಕೆ.
ಕ್ಷೇತ್ರ ಶಿಕ್ಷಣಾಧಿಕಾರಿ. ಸಾಗರ