ಡೈಲಿ ವಾರ್ತೆ: 02 ಡಿಸೆಂಬರ್ 2022

ವರದಿ: ಶಿವಾನಂದ ಆರ್.ಬಿದರಕುಂದಿ.

ಅನೈತಿಕ ಸಂಬಂಧ: ಪತಿಯಿಂದ ಪತ್ನಿ, ಪ್ರಿಯಕರನ ಕೊಲೆ.

ಯಾದಗಿರಿ:ಡಿ.2. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಚಾಪೂರ ಗ್ರಾಮದ ಹತ್ತಿ ಹೊಲದಲ್ಲಿ ಹಾಡುಹಗಲೇ ಪತಿಯಿಂದ ಪತ್ನಿ ಮತ್ತು ಪತ್ನಿಯ ಪ್ರಿಯತಮನ ಕೊಲೆಯಾಗಿರುವ ಘಟನೆ ಗುರುವಾರ ಸಾಯಂಕಾಲ ನಡೆದಿದೆ.

ಹತ್ತಿ ಹೊಲದಲ್ಲಿ ಪತ್ನಿ ಬಸಮ್ಮ (34), ಆಕೆಯ ಪ್ರಿಯತಮ ನಾಡಗೌಡ (36) ಅನೈತಿಕ ಸಂಬಂಧದಲ್ಲಿ ತೊಡಗಿದ್ದಾಗ ಪತಿ ಮಲ್ಲಣ್ಣ ಮಾರಕಾಸ್ತ್ರಗಳಿಂದ ಇರಿದು ಹತ್ಯೆ ಮಾಡಿದ್ದಾನೆ. ಎಲ್ಲರೂ ಒಂದೇ ಕೋಮಿಗೆ ಸೇರಿದವರಾಗಿದ್ದಾರೆ.

ಆರೋಪಿ ಪತಿ ಮಲ್ಲಣ್ಣನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿಕೊಂಡಿದ್ದಾರೆ. ಸ್ಥಳಕ್ಕೆ ಸುರಪುರ ಉಪವಿಭಾಗದ ಡಿವೈಎಸ್ಪಿ ಟಿ.ಮಂಜುನಾಥ, ಪಿಎಸ್‍ಐ ಹಣಮಂತ ಬಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.