ಡೈಲಿ ವಾರ್ತೆ: 28 ಡಿಸೆಂಬರ್ 2022

ಕೋಟ: ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದದಿಂದ ಬೈದು ಸರ್ಕಾರಿ ಕೆಲಸಕ್ಕೆ ಅಡ್ಡಿ ದೂರು

ಕೋಟ: ಬೇಳೂರು ಗ್ರಾಮದ ದೇಲಟ್ಟು ಪ್ರದೇಶದಲ್ಲಿ ಅನಧೀಕೃತವಾಗಿ ಕೊಜೆ ಮಣ್ಣು ತೆಗೆಯುತ್ತಿರುವ ಬಗ್ಗೆ ಸ್ಥಳ ವೀಕ್ಷಣೆಗೆ ಹೋಗಿದ್ದ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದದಿಂದ ಬೈದು ಅವಮಾನಿಸಿದ ಘಟನೆ ನಡೆದಿದೆ.  

  ಬೇಳೂರು ಗ್ರಾಮದ ದೇಲಟ್ಟು ಪರಿಸರದಲ್ಲಿ ಅನಧಿಕೃತವಾಗಿ ಕೊಜೆ ಮಣ್ಣು ತೆಗೆಯುತ್ತಿದ್ದ ಪ್ರದೇಶಕ್ಕೆ ಸಾರ್ವಜನಿಕರು ನೀಡಿದ ದೂರಿನ ತನಿಖೆಗೆ ತೆರಳಿದ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸಂದ್ಯಾ ಕುಮಾರಿ ಅವರಿಗೆ ಆರೋಪಿ ಬಸ್ರೂರು ಪಂಚಾಯಿತಿಯ ಉಪಾಧ್ಯಕ್ಷ ಗ್ರಾಮದ ದಿನಕರ ಶೆಟ್ಟಿ ಎನ್ನುವವರು ದೂರವಾಣಿ ಮೂಲಕ   ಮಹಿಳಾ ಅಧಿಕಾರಿ ಎನ್ನುವುದನ್ನು ಕೂಡ ಲಕ್ಷಿಸದೇ ಅವಾಚ್ಯ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಅವಮಾನಿಸಿ ಸಾರ್ವಜನಿಕ ಸ್ಥಳದಲ್ಲಿ ಮುಜುಗರ ಉಂಟಾಗುವಂತೆ ಮಾಡಿ ಸರ್ಕಾರಿ ಕೆಲಸ ಮಾಡದಂತೆ ಅಡ್ಡಿಪಡಿಸಿರುತ್ತಾರೆ ಎಂದು ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.