ಡೈಲಿ ವಾರ್ತೆ:09 ಜನವರಿ 2023

ಜ. 10 ರಂದು (ನಾಳೆ) ಮೂಡುಬೆಟ್ಟು ನೇಜಾರಿನ ಶ್ರೀ ಬಬ್ಬುಸ್ವಾಮಿ ಕೆರೆ ಜೀರ್ಣೋದ್ಧಾರದ ಬಗ್ಗೆ ದರ್ಶನ ಸೇವೆ ಹಾಗೂ ಸಮಿತಿ ರಚನೆ

ಉಡುಪಿ: ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಬೆಟ್ಟು ನೇಜಾರಿನಲ್ಲಿ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಶ್ರೀ ಬಬ್ಬುಸ್ವಾಮಿ ಕೆರೆ ಜೀರ್ಣೋದ್ಧಾರದ ಬಗ್ಗೆ ದರ್ಶನ ಸೇವೆ ಹಾಗೂ ಜೀರ್ಣೋದ್ಧಾರದ ಬಗ್ಗೆ ಸಮಿತಿ ರಚನೆಯು ದಿನಾಂಕ 10 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಬಬ್ಬುಸ್ವಾಮಿ ಕೆರೆಯ ವಠಾರದಲ್ಲಿ ಜರಗಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಯನ್ನು ನೀಡಬೇಕಾಗಿ ಸಮಿತಿಯು ಪ್ರಕಟಿಸಿದೆ.