ಡೈಲಿ ವಾರ್ತೆ : 01 ಮೇ 2022

ಈ ವಿಡಿಯೋ ಪೂರ್ತಿ ನೋಡಿ

ಕೇರಳ : ಬೆಟ್ಟದಿಂದ ಉರುಳುತ್ತಿದ್ದ ಬಂಡೆಯೊಂದು ಇಬ್ಬರು ಪ್ರಯಾಣಿಸುತ್ತಿದ್ದ ಮೋಟಾರ್ ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವಿಗೀಡಾಗಿರುವ ಘಟನೆ ಕೇರಳದ ತಾಮರಸ್ಸೆರಿಯಲ್ಲಿ ನಡೆದಿದೆ.

ಮೃತರನ್ನು ಮಲಪ್ಪುರಂ ಜಿಲ್ಲೆಯ ನಿವಾಸಿ ಅಭಿನವ್ (20) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ 21 ವರ್ಷದ ಅನೀಶ (21) ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಯು ತಾಮರಸ್ಸೆರಿಯ
ಆರನೇ ತಿರುವು ದಾಟುತ್ತಿರುವಾಗ, ಕೆಲವೇ ಸೆಕೆಂಡುಗಳಲ್ಲಿ ಬಂಡೆಯು ಬೆಟ್ಟದಿಂದ ಪುಟಿಯುತ್ತ ಬಂದು ಇಬ್ಬರು ತೆರಳುತ್ತಿದ್ದ ಬೈಕ್‌ಗೆ ಅಪ್ಪಳಿಸಿದೆ. ಬಂಡೆ ಬಡಿದ ರಭಸಕ್ಕೆ ಅಭಿನವ ಮತ್ತು ಅನೀಶ ಅವರು ಘಾಟ್ ರಸ್ತೆಯ ತಡೆಗೋಡೆಯ ಮೇಲಿಂದ ಹಾರಿ ಕೆಳಗಿನ ಕಂದಕಕ್ಕೆ ಎಸೆಯಲ್ಪಟ್ಟಿದ್ದಾರೆ.

ಅಭಿನವ್ ಅವರನ್ನು ಹಿಂಬಾಲಿಸುತ್ತಿದ್ದ ಪಿಲಿಯನ್ ರೈಡರ್ ಈ ದುರ್ಘಟನೆ ವಿಡಿಯೋ ಚಿತ್ರಣ ಮಾಡಿದ್ದಾರೆ. ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ.