ಡೈಲಿ ವಾರ್ತೆ : 01 ಮೇ 2022

ಕೋಟ : ಕೂಟ ಮಹಾಜಗತ್ತು ಸಾಲಿಗ್ರಾಮ (ರಿ) ಕೇಂದ್ರ ಸಂಸ್ಥೆ ಮತ್ತು ಸಾಲಿಗ್ರಾಮ ಅಂಗ ಸಂಸ್ಥೆ ಸಾಲಿಗ್ರಾಮವತಿಯಿಂದ ದಿನಾಂಕ 07 ರಂದು ಶನಿವಾರ ಸಂಜೆ 4 ಗಂಟೆಗೆ ಕೂಟಬಂದು ಭವನದಲ್ಲಿ ನಮ್ಮನ್ನಗಲಿರುವ ಶ್ರೀ ಗುರುನರಸಿಂಹ ಬಿಲಿಯನ್ ಪೌಂಡೇಶನ್ ನ ನಿಕಟಪೂರ್ವ ಅಧ್ಯಕ್ಷ ಹಂದಟ್ಟು ದಿ. ಪರಮೇಶ್ವರ ಬಾಸ್ರಿಯವರಿಗೆ “ನುಡಿನಮನ“ದ ಮೂಲಕ “ಶ್ರದ್ಧಾಂಜಲಿ” ಸಮರ್ಪಣೆ ನಡೆಯಲಿದೆ.

ಹಾಗೂ ಜೂನ್ 1ರಿಂದ ಹಿಡಿದು ಜೂನ್ 8 ರವರೆಗೆ ಕೇಂದ್ರ ಸಂಸ್ಥೆಯ ಆಶ್ರಯದ ಸಾಲಿಗ್ರಾಮದಲ್ಲಿ ನಡೆಸಲುದ್ದೇಶಿಸಿರುವ ” ಶಾಕಲ ಋಕ್ ಸಂಹಿತಾ ಯಾಗ ” ದ ಬಗ್ಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದ್ದು. ಸರ್ವರೂ ಈ ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಕೇಂದ್ರಾಧ್ಯಕ್ಷರಾದ ಹೆಚ್ ಸತೀಶ್ ಹಂದೆ ಹಾಗೂ ಸಾಲಿಗ್ರಾಮ ಅಂಗ ಸಂಸ್ಥೆ ಅಧ್ಯಕ್ಷರಾದ ಏ ಶ್ರೀಪತಿ ಅಧಿಕಾರಿ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .