ಡೈಲಿ ವಾರ್ತೆ : 02 ಮೇ 2022

ಮಂಗಳೂರು: ಮಂಗಳೂರು ನಗರ ಪೊಲೀಸ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಭಾಗವಹಿಸಿ ಪೊಲೀಸರೊಂದಿಗೆ ಸಂವಾದ ನಡೆಸಿದರು. ನಟ ಶಿವರಾಜ್ ಕುಮಾರ್’ಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಸಾಥ್ ನೀಡಿದರು.

ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಿದ ಶಿವರಾಜ್ ಕುಮಾರ್ ಬಳಿಕ ಹಾಡು ಹಾಡಿ ಡ್ಯಾನ್ಸ್ ಮಾಡಿ ರಂಜಿಸಿದರು. ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರ ಹಾಡಿಗೆ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಡಿದರು.

ನಂತರ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮನ ಸಲ್ಲಿಸಲಾಯಿತು. ಅಪ್ಪುವನ್ನು ಈ ರೀತಿ ನೆನಪು ಮಾಡಿಕೊಳ್ಳುವುದಕ್ಕಿಂತ ಅಪ್ಪುನ ಸೆಲೆಬ್ರೇಶನ್ ಮಾಡಬೇಕು ಎಂದು ಶಿವರಾಜಕುಮಾರ್ ಇದೇ ವೇಳೆ ಕರೆ ನೀಡಿದರು.


ಶಿವರಾಜ್ ಕುಮಾರ್ ಮಾತನಾಡಿ ನಟನಾಗಿ, ನಮಗೆ ನೋವು ನೀಡಿ ಪುನೀತ್ ರಾಜ್ ಕುಮಾರ್ ಹೊರಟು ಹೋದರೂ ಆತ ಮಾತನಾಡದೆ ಮಾನವೀಯತೆಗೆ ಉದಾಹರಣೆಯಾಗಿ ಹೊರಟು ಹೋದರು. ಮಂಗಳೂರು ನನಗೆ ಇಷ್ಟದ ಊರು. ನಾನು ಪೊಲೀಸ್ ಪಾತ್ರ ಮಾಡಿದ ಎಲ್ಲ ಚಿತ್ರಗಳು ಯಶಸ್ವಿಯಾಗಿವೆ. ತುಳು ಕನ್ನಡ ಎರಡೂ ಭಾಷೆಗಳನ್ನು ಮಾತನಾಡುವ ಜನಗಳಿದ್ದಾರೆ. ಇನ್ನೊಮ್ಮೆ ಬಂದು ಇನ್ನೂ ಹೆಚ್ಚು ಕಾಲ ನಿಮ್ಮ ಜೊತೆಗೆ ಭಾಗವಹಿಸುವೆ ಎಂದು ಹೇಳಿದರು.