ಡೈಲಿ ವಾರ್ತೆ : 30 ಜೂನ್ 2022
✍🏻 ಕುಮಾರ್ ನಾಯ್ಕ್ ಭಟ್ಕಳ
ಭಟ್ಕಳ್-SSF Sarpankatte Unit ವತಿಯಿಂದ ದಿನಾಂಕ 28-06-2022 ಮಂಗಳವಾರ ಮಗ್ರಿಬ್ ಸಮಾಝಿನ ಬಳಿಕ ಖಿಳ್ರಿಯಾ ಜುಮುಅ ಮಸ್ಜಿದ್ನಲ್ಲಿ ರೆಜುವಿನೇಟ್ ಸಂಘಟನಾ ತರಬೇತಿ ಶಿಬಿರ ಹಾಗೂ ತ್ರೈಮಾಸಿಕ ಜಲಾಲಿಯಾ ರಾತೀಬ್ ಮಜ್ಲಿಸ್ ನಡೆಯಿತು.
ನೇತೃತ್ವ: ಸಯ್ಯಿದ್ ಅಲವಿ ಅಲ್ ಬುಖಾರಿ ಕರ್ಕಿ, ಆರಿಫ್ ಸಅದಿ ಭಟ್ಕಳ, ಶಂಸುದ್ದೀನ್ ಅಹ್ಸನಿ ಸರ್ಪಣಕಟ್ಟೆ
ಮಸೂದ್ ಅಹ್ಸನಿ ಹೆಮ್ಮಾಡಿ ತರಗತಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಸರ್ಪಣಕಟ್ಟೆ ಯುನಿಟ್ ವತಿಯಿಂದ ಸಯ್ಯಿದ್ ಅಲವಿ ಅಲ್ ಬುಖಾರಿ ಕರ್ಕಿ, ನಾವುಂದ ರೇಂಜ್ ಅಧ್ಯಕ್ಷರಾಗಿ ಆಯ್ಕೆಯಾದ ಮಸೂದ್ ಅಹ್ಸನಿ ಹೆಮ್ಮಾಡಿ ಹಾಗೂ ಎಸ್ ವೈ ಎಸ್ ಅಧ್ಯಕ್ಷರಾದ ಕೆ.ಎಂ ಶರೀಫ್ ಸರ್ಪಣಕಟ್ಟೆ ಇವರನ್ನು ಸನ್ಮಾನಿಸಲಾಯಿತು.