ಡೈಲಿ ವಾರ್ತೆ: 08/ಮೇ /2024

ಬಿಜೆಪಿ ಸಕ್ರೀಯ ಕಾರ್ಯಕರ್ತೆ ಪ್ರೇಮ ಎಸ್.ಶೆಟ್ಟಿ ಅನಾರೋಗ್ಯದಿಂದ ನಿಧನ

ಬಂಟ್ವಾಳ : ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ಕಾರ್ಯಕರ್ತೆ, ಅಮ್ಟೂರು ಗ್ರಾಮದ ಬಾಳಿಕೆ ನಿವಾಸಿ ಪ್ರೇಮ ಎಸ್.ಶೆಟ್ಟಿ (50) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ.

   ಮಾಜಿ ಸೈನಿಕ ದಿ.ಶ್ರೀನಿವಾಸ ಶೆಟ್ಟಿಯವರ ಪತ್ನಿಯಾದ ಇವರು ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿದ್ದರು.
ಅವರು ಇತ್ತೀಚಿನ ಕೆಲ ದಿನಗಳಿಂದ ಅಸೌಖ್ಯದಿಂದ ಕೂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿರುವುದಾಗಿ ಕುಟುಂಸ್ಥರು ತಿಳಿಸಿದ್ದಾರೆ.

ಪ್ರೇಮ ಶೆಟ್ಟಿ ಅವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,  ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.