ವರದಿ : ಸುಚಿತ್ರಾ ನಾಯ್ಕ ಹೊನ್ನಾವರ



ಹೊನ್ನಾವರ : ತಾಲೂಕಿನ ಮಂಕಿ ತಾಳಮಕ್ಕಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ದರ್ಶನ ಉದಯ ನಾಯ್ಕ ಮತ್ತು ದಪಡ್ಡಗುಂದದ ಮನೋಜ ನಾಯ್ಕ ಇಲ್ಲಿನ ತಾಳಮಕ್ಕಿ ಅರಬ್ಬಿ ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಸ್ಥಳೀಯರು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ಸ್ಮಶಾನ ಮೌನ ಆವರಿಸಿದೆ. ಮೃತದೇಹ ಪತ್ತೆಯಾಗಿದ್ದು ಮಂಕಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.