ಡೈಲಿ ವಾರ್ತೆ: 03 ಅಕ್ಟೋಬರ್ 2022

ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಂಡ ಶಿಹಾಬ್ ಚೊಟೂರುಗೆ ವಿಸಾ ನಿರಾಕರಿಸಿದ ಪಾಕಿಸ್ತಾನ

ಲೂದಿಯಾನ: ಕೇರಳದಿಂದ ಸೌದಿ ಅರೇಬಿಯಾದ ಮಕ್ಕಾಕ್ಕೆ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ಹೊರಟಿದ್ದ ಶಿಹಾಬ್ ಚೊಟೂರು ಅವರಿಗೆ ಪಾಕಿಸ್ತಾನದ ಮೂಲಕ ನಡೆದುಕೊಂಡು ಹೋಗಲು ಅಲ್ಲಿನ ಸರ್ಕಾರ ವಿಸಾ ನಿರಾಕರಿಸಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಕೇರಳದ ಮಲಪ್ಪುರಂ ಜಿಲ್ಲೆಯ 29ರ ಹರಯದ ಯುವಕ ಶಿಹಾಬ್ ಚೊಟೂರು ಪಾದಯಾತ್ರೆ ಮೂಲಕ ಹಜ್ಜ್ ಯಾತ್ರೆ ಆರಂಭಿಸಿ ಇದೀಗ ಪಂಜಾಬ್ ತಲುಪಿದ್ದಾರೆ. ಒಟ್ಟು 123 ದಿನದ ಯಾತ್ರೆಯನ್ನು ಭಾರತದಲ್ಲಿ ಮುಗಿಸಿ ಪಾಕಿಸ್ತಾನದ ಗಡಿ ತಲುಪಿದ್ದಾರೆ.