ಡೈಲಿ ವಾರ್ತೆ: 22 ಅಕ್ಟೋಬರ್ 2022

ದಕ್ಷಿಣ ಕನ್ನಡ: ಅಪರಿಚಿತ ಮೃತದೇಹದ ಕಳೇಬರ ಪತ್ತೆ

ಪುತ್ತೂರು : ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹದ ಎಲುಬುಗಳು ಪತ್ತೆಯಾದ ಘಟನೆ ಪುತ್ತೂರಿನ ಕೇಪುಳು ಸಿದ್ಯಾಳ ಎಂಬಲ್ಲಿ ನಡೆದಿದೆ.


ಮೃತ ವ್ಯಕ್ತಿಯನ್ನು ತಾರಿಗುಡ್ಡೆ ನಿವಾಸಿ ಎಂದು ಶಂಕಿಸಲಾಗಿದ್ದು, ಹಳೆಯ ಎಲುಬುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಲುಬು ಸಿಕ್ಕಿದ ಜಾಗದಲ್ಲಿ ಗಿಡಗಂಟಿಗಳು ತುಂಬಿದ್ದರಿಂದ ಯಾರಿಗೂ ಈವರೆಗೆ ತಿಳಿಯದೆ ಇದ್ದು, ನಿನ್ನೆ ಹುಲ್ಲು ತೆಗೆಯುವ ವೇಳೆ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿ ಮೃತಪಟ್ಟು ಸುಮಾರು ಸಮಯಗಳೇ ಕಳೆದಿದೆ ಎನ್ನಲಾಗುತ್ತಿದ್ದು ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ತನಿಖೆ ನಂತರವಷ್ಟೇ ಹೆಚ್ಚಿನ ಮಾಹಿತಿ ಬಹಿರಂಗಗೊಳ್ಳಲಿದ್ದು, ಇದೊಂದು ಕೊಲೆ ಅಥವಾ ಆತ್ಮಹತ್ಯೆ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ.