ಡೈಲಿ ವಾರ್ತೆ:23 ಜನವರಿ 2023

ಬಂಟ್ವಾಳ : ಜನವರಿ 24 ರಂದು ಮಾನವ ಬಂದುತ್ವ ವೇದಿಕೆ ವತಿಯಿಂದ ಸಂವಿಧಾನ ಅರಿವಿನ ಹಬ್ಬ


ಬಂಟ್ವಾಳ, ಜ.21 : ಮಾನವ ಬಂದುತ್ವ ವೇದಿಕೆ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಜನವರಿ 24 ರಂದು ಬೆಳಗ್ಗೆ 9.30ಕ್ಕೆ ಬಿ.ಸಿ.ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ಸಂವಿಧಾನ ಅರಿವಿನ ಹಬ್ಬ ನಡೆಯಲಿದೆ.

ಚಿಂತಕ ಡಾ.ಸಿದ್ದನಗೌಡ ಪಾಟೀಲ ಉದ್ಘಾಟಿಸಲಿದ್ದು, ಮಡಿಕೇರಿಯ ನ್ಯಾಯವಾದಿ, ಲೇಖಕ ಕೆ.ಆರ್. ವಿದ್ಯಾಧರ್ ಅಧ್ಯಕ್ಷತೆ ವಹಿಸಲಿರುವರು.

ಇದೇ ವೇಳೆ ವಿವಿಧ ಗೋಷ್ಠಿಗಳು ನಡೆಯಲಿದ್ದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದು, ಶಿಕ್ಷಣ ತಜ್ಞ ಲೇಖಕ ಶ್ರೀಪಾದ ಭಟ್ “ದೇಶದ ಆರ್ಥಿಕ ಸ್ಥಿತಿ ಭ್ರಮೆ ಮತ್ತು ವಾಸ್ತವ”, ಮಂಗಳೂರಿನ ನ್ಯಾಯವಾದಿ ದಿನೇಶ್ ಹೆಗಡೆ ಉಳೆಪ್ಪಾಡಿ “ಕರಾವಳಿಯ ಸಾಮಾಜಿಕ ಸ್ಥಿತ್ಯಂತರ ಮತ್ತು ತಲ್ಲಣಗಳು”, ಲೇಖಕ ಸಂಸ್ಕೃತಿ ಚಿಂತಕ ಎಲ್.ಎನ್.
ಮುಕುಂದರಾಜ್ “ಭಾರತದ ಬಹುತ್ವದ ಎದುರಿನ ಸವಾಲುಗಳು”, ಶಿಕ್ಷಣ ತಜ್ಙೆ ಫರ್ಜಾನಾ ಅಶ್ರಫ್ “ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಸ್ತಿತ್ವದ ಸವಾಲುಗಳು”ಎಂಬ ವಿಷಯದಲ್ಲಿ ವಿಚಾರ ಮಂಡಿಸಲಿದ್ದಾರೆ

ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ಪ್ರಾಸ್ತಾವನೆಗೈಯಲಿದ್ದಾರೆ
ಎಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ ಮೋಹನ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.