ಡೈಲಿ ವಾರ್ತೆ : 30 ಆಗಸ್ಟ್ 2022

ವರದಿ : ವಿದ್ಯಾಧರ ಮೊರಬಾ ಅಂಕೋಲಾ

ಅಂಕೋಲಾ: ಮೊಬೈಲ್ ಕಳ್ಳತನದ ಇಬ್ಬರ ಆರೋಪಿಗಳ ಬಂಧನ..!

ಅಂಕೋಲಾ : ಇಲ್ಲಿಯ ಸಾರಿಗೆ ಬಸ್ ನಿಲ್ದಾಣ ಪ್ರದೇಶದಲ್ಲಿ ಮೊಬೈಲ್ ಕಳ್ಳತನ ಮಾಡಿದ ಇಬ್ಬರು ಆರೋಪಿಯನ್ನು ಬಂಧಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಹುಬ್ಬಳ್ಳಿಯ ಗದಗ ರಸ್ತೆಯ ರೈಲ್ವೆ ಆಸ್ಪತ್ರೆ ಪಕ್ಕದ ನಿವಾಸಿ
ಮಹಮ್ಮದ್ ಅಲಿ ಕುಂದಗೋಳ್ ತಂದೆ ಮೆಹಬೂಬ್‍ಸಾಬ್ ಅಲಿಯಾಸ ಕುಮಾರ ತಂದೆ ಹನುಮಂತಪ್ಪ ಅಂಬಿಗೇರ್ (38), ಕೇರಳದ ಕಾಸರಗೋಡಿನ ಪೆರಂಬೂರ್ ತಳ್ಳಿಕೇರೆ ನಿವಾಸಿ ಟೋನಿ ಜೇಮ್ಸ್ ತಂದೆ ಜಾನ್ ಜೇಮ್ಸ್ (34) ಬಂಧೀತ ಆರೋಪಿಗಳು.

ಇವರು ಸೋಮವಾರ ಸಂಜೆ ಪೊಲೀಸ್ ಜೀಪ್
ನೋಡಿದ ಕೊಡಲೇ ಅವಸರದಲ್ಲಿ ಬಸ್ ನಿಲ್ದಾಣದ ಒಳಪ್ರವೇಶಿಸಿದರು.

ಇದನ್ನು ವಿಕ್ಷಿಸಿದ ಪಿಎಸ್‍ಐ ಮಹಾಂತೇಶ ಬಿ.ವಿ., ಅವರನ್ನು ವಿಚಾರಣೆಗೆ ಒಳಪಡಿಸಿದ್ದಾಗ ಮೊಬೈಲ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಇವರಿಂದ ವಿವಿಧ ಕಂಪನೆಯ 6 ಮೊಬೈಲ್ ಮತ್ತು 1260 ರೂ.ನಗದು ವಶಪಡೆದುಕೊಂಡಿದ್ದರು. ಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿಸುವ ಕಾರ್ಯದಲ್ಲಿ ಸಿಬ್ಬಂದಿ ಮಂಜುನಾಥ ಲಕ್ಷ್ಮಾಪುರ,
ಶ್ರೀಕಾಂತ ಕಟಬರ, ಮಂಜುನಾಥ ಗಡಗಿ ಇತರರು ಪಾಲ್ಗೊಂಡಿದ್ದರು.