ಡೈಲಿ ವಾರ್ತೆ:27 ಫೆಬ್ರವರಿ 2023

ಬ್ರಹ್ಮಾವರ: ಚಿರತೆಗೆ ಆಹಾರವಾದ ಅಂಗಳದಲ್ಲಿದ್ದ ನಾಯಿ

ಬ್ರಹ್ಮಾವರ: ಬಾರ್ಕೂರಿನ ಹೊಸಾಳ ಗ್ರಾಮದ ಸೀತಾ ಪೂಜಾರ್ತಿ ಅವರ ಸಾಕು ನಾಯಿಯನ್ನು ಶನಿವಾರ ತಡರಾತ್ರಿ ಮನೆಯಂಗಳದಲ್ಲಿ ಚಿರತೆ ಬೇಟೆಯಾಡಿದೆ. ಈ ಘಟನೆಯು ರವಿವಾರ ಬೆಳಗ್ಗೆ ಮನೆಯವರ ಗಮನಕ್ಕೆ ಬಂದಿದೆ.

ನಾಯಿಯ ಅಂಗಾಂಗಳಾದ ಕಾಲು, ದೇಹದ ಇತರ ಭಾಗಗಳನ್ನು ಅಲ್ಲಿಯೇ ಬಿಟ್ಟು ಹೋಗಿದೆ. ಬಾರ್ಕೂರಿನ ಜನನಿಬಿಡ ಪ್ರದೇಶದಲ್ಲಿ ಚಿರತೆ ಸಂಚಾರ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆಯು ಘಟನ ಸ್ಥಳದ ಸಮೀಪ ಚಿರತೆ ಸೆರೆಗಾಗಿ ಬೋನು ಇರಿಸಿದೆ.