ಡೈಲಿ ವಾರ್ತೆ:01 ಏಪ್ರಿಲ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಒಣ ಗಾಂಜಾ ಸಾಗಾಟ ಆರೋಪಿಯ ಬಂಧನ

ಸಾಗರ:ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡಬ್ಯಾಣ ಗ್ರಾಮದ ಬಳಿ ಸಿಬ್ಬಂದಿ ಗಳೊಂದಿಗೆ ರಸ್ತೆಗಾವಲು ಮಾಡುವಾಗ ಬಂದ ಮಾಹಿತಿನ್ವಯ ಬನ್ನೂರು ಗ್ರಾಮದ ವಾಸಿಯಾದ ಕರಿಬಸಪ್ಪ ಬಿನ್ ಹುಚ್ಚಪ್ಪ ರವರು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಒಣ ಗಾಂಜಾ ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿದ್ದ 500 ಗ್ರಾಂ ಒಣ ಗಾಂಜಾ ಹಾಗೂ ವಾಹನವನ್ನು (ಸುಮಾರು 115000 ರೂ. ಮೌಲ್ಯ)ಇಲಾಖಾ ವಶಕ್ಕೆ ಪಡೆದುಕೊಂಡು ಸದರಿ ವ್ಯಕ್ತಿಯ ವಿರುದ್ದ NDPS ಕಾಯ್ದೆಯಂತೆ ಘೋರ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಸಂದೀಪ್ ಹಾಗೂ ಸಿಬ್ಬಂದಿಗಳಾದ ದೀಪಕ್, ಮಹಾಬಲೇಶ್, ಗುರುಮೂರ್ತಿ, ಡ್ರೈವರ್ ಗಣಪತಿ ಭಾಗಿಯಾಗಿದ್ದಾರೆ.