ಡೈಲಿ ವಾರ್ತೆ:26 ಏಪ್ರಿಲ್ 2023

ಸಾಯಿಬ್ರಕಟ್ಟೆಯಲ್ಲಿ ಬೈಕ್ ಗಳು ಮುಖಾ ಮುಖಿ ಡಿಕ್ಕಿ ಓರ್ವ ಸಾವು, ಇನ್ನೊರ್ವ ಗಂಭೀರ ಗಾಯ

ಕೋಟ: ಎರಡು‌ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಸಾವು ಇನ್ನೊರ್ವ ಗಂಭೀರ ಗಾಯಗೊಂಡ ಘಟನೆ ಎ. 26 ರಂದು ಬುಧವಾರ ಸಾಯಿಬ್ರಕಟ್ಟೆಯಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕ
ಹಿಲಿಯಾಣದ ಮಹಮ್ಮದ್ ಸಾಫನ್ ಎಂದು ಗುರುತಿಸಲಾಗಿದೆ.

ಅಕ್ರಮ್ ಎನ್ನುವವರು ಮಹಮ್ಮದ್ ಸಫಾನ್ ನನ್ನು ತನ್ನ ಬೈಕ್ ನಲ್ಲಿ ಕುಳ್ಳಿರಿಸಿಕೊಂಡು ಹಾಲಾಡಿಯಿಂದ ಬ್ರಹ್ಮಾವರಕ್ಕೆ ಬರುತ್ತಿದ್ದ ಸಂದರ್ಭ ಸಾಯಿಬ್ರಕಟ್ಟೆ ಪ್ರೌಢಶಾಲೆಯ ಬಳಿ ಭುಜಂಗ ಶೆಟ್ಟಿ ಎನ್ನುವವರು ಸಾಯಿಬ್ರಕಟ್ಟೆಗೆ ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿ ಹೊಡೆದ ಕಾರಣ ಇಬ್ಬರು ರಸ್ತೆ ಮೇಲೆ ಬಿದ್ದು ಗಂಭೀರ ಗಾಯಗಳಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ಮಹಮ್ಮದ್ ಸಫಾನ್
ಇಂದು ರಾತ್ರಿ ಚಿಕಿತ್ಸೆಪಲಕಾರಿಯಾಗದೆ
ಮೃತಪಟ್ಟಿರುತ್ತಾರೆ ಎಂದು ತಿಳಿದು ಬಂದಿದೆ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.