ಡೈಲಿ ವಾರ್ತೆ : 01 ಜೂನ್ 2022

✒️ ಓಂಕಾರ ಎಸ್. ವಿ. ತಾಳಗುಪ್ಪ

ಗೇರುಸೊಪ್ಪ : ಹೊನ್ನಾವರ ತಾಲೂಕು ಗೇರುಸೊಪ್ಪ ಪೊಲೀಸರು ಮಿಂಚಿನ ಕಾರ್ಯಾಚರಣೆ ನೆಡೆಸಿ ರಾಷ್ಟ್ರೀಯ ಹೆದ್ದಾರಿ 206 ರ ಮಾವಿನಗುಂಡಿ ಘಾಟಿ ಬಳಿ ಲಾರಿಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನವಾರುಗಳನ್ನೂ ರಕ್ಷಿಸಿ, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಜಾನವರುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಚಾಲಕರನ್ನು ಬಂಧಿಸಿದ ಗೇರುಸೊಪ್ಪ ಪೊಲೀಸರು ಸೂಕ್ತ ತನಿಖೆ ನೆಡೆಸುತ್ತಿದ್ದಾರೆ.

ಗೋ ಪ್ರೇಮಿಗಳು ಗೇರುಸೊಪ್ಪ ಪೊಲೀಸರ ಮಿಂಚಿನ ಕಾರ್ಯಾಚರಣೆ ನೆಡೆಸಿ ಜಾನವಾರುಗಳನ್ನೂ ರಕ್ಷಣೆ ಮಾಡಿರುವುದನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.