ಡೈಲಿ ವಾರ್ತೆ: 02/ಮೇ /2024

ಸಾಲಿಗ್ರಾಮ ಗಣೇಶ್ ವಾಚ್ ವರ್ಕ್ಸ್ ಅಂಗಡಿ ಮಾಲೀಕ ರಾಮಚಂದ್ರ ಪ್ರಭು ಇನ್ನಿಲ್ಲ

ಕೋಟ: ಸಾಲಿಗ್ರಾಮ ಚಿತ್ರಪಾಡಿಯಲ್ಲಿರುವ ಹೆಸರಾಂತ ಗಣೇಶ್ ವಾಚ್ ವರ್ಕ್ಸ್ ಅಂಗಡಿ ಮಾಲೀಕ ರಾಮಚಂದ್ರ ಪ್ರಭು (68) ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ರಾಮಚಂದ್ರ ಪ್ರಭುಗಳು ಹಲವು ವರ್ಷದಿಂದ ಸಾಲಿಗ್ರಾಮದಲ್ಲಿ ಗಣೇಶ್ ವಾಚ್ ವರ್ಕ್ಸ್ ಅಂಗಡಿಯನ್ನು ನಡೆಸುತ್ತಿದ್ದರು. ಪ್ರಾಮಾಣಿಕ ವ್ಯವಹಾರಸ್ಥರಾಗಿದ್ದ ಅವರು ಎಲ್ಲರಿಗೂ ಚಿರಪರಿಚಿತರು. ಗುರುವಾರ ಬೆಳಿಗ್ಗೆ ಮನೆಯಲ್ಲೇ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಹೃದಯಘಾತದಿಂದ ಮೃತಪಟ್ಟಿರುತ್ತಾರೆ.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಾಳೆ ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಯಲಿದೆ.