ಡೈಲಿ ವಾರ್ತೆ: 02/ಮೇ /2024

ಕೋಟ: ಧರ್ಮಸ್ಥಳ ಮೇಳದ ಕಲಾವಿದ ಪುತ್ತೂರು ಗಂಗಾಧರ ಜೋಗಿ ಹೃದಯಾಘಾತದಿಂದ ಮೃತ್ಯು

ಕೋಟ: ಧರ್ಮಸ್ಥಳ ಮೇಳದ ಕಲಾವಿದ ಪುತ್ತೂರು ಗಂಗಾಧರ ಜೋಗಿ (59) ಹೃದಯಾಘಾತದಿಂದ ಮೃತಪಟ್ಟ ಘಟನೆ ಬುಧವಾರ ರಾತ್ರಿ ಕೋಟದಲ್ಲಿ ನಡೆದಿದೆ.

ಮೇ. 1 ರಂದು ರಾತ್ರಿ ಕೋಟ ಗಾಂಧಿ ಮೈದಾನ ಸಮೀಪ ನಡೆದ ಧರ್ಮಸ್ಥಳ ಮೇಳದ ” ಧರ್ಮಸ್ಥಳ ಕ್ಷೇತ್ರ ಮಹಾತ್ಮೆ” ಪ್ರಸಂಗದಲ್ಲಿ  ಪುತ್ತೂರು ಗಂಗಾಧರ ಜೋಗಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು ಇನ್ನೇನು ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಧರ್ಮಸ್ಥಳ ಮೇಳದಲ್ಲಿ  42 ವರ್ಷಗಳಿಂದ ನಿರಂತರ ಕಲಾವಿದರಾಗಿ  ಸೇವೆ ಸಲ್ಲಿಸಿದ್ದರು.
ಜೋಗಿಯವರ ಮೃತದೇಹವನ್ನು ಕುಂದಾಪುರ ಶವಗಾರಕ್ಕೆ ಸಾಗಿಸಲಾಗಿದೆ.