ಡೈಲಿ ವಾರ್ತೆ : 31 ಜುಲೈ 2022

✒️ ಓಂಕಾರ ಎಸ್. ವಿ. ತಾಳಗುಪ್ಪ

ಜೆಡಿಎಸ್ ಪಕ್ಷ ಮಧು ಬಂಗಾರಪ್ಪ ರವರಿಗೆ ಅನೇಕ ಸವಲತ್ತು ನೀಡಿದರೂ ಜೆಡಿಎಸ್ ತೊರೆದು ಅನ್ಯಾಯವೆಸಗಿದ್ದಾರೆ – ಕುಗ್ವೆ ಮನೋಹರ ಮಧು ಬಂಗಾರಪ್ಪ ವಿರುದ್ಧ ಟೀಕೆ

ತಾಳಗುಪ್ಪ:-ಸೊರಬ ವಿಧಾನಸಭಾ ಕ್ಷೇತ್ರ ತಾಳಗುಪ್ಪ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆಯು ಈ ದಿನ 31.07.2022ರಂದು ತಾಳಗುಪ್ಪದ ಶ್ರೀ ಕದಂಬೇಶ್ವರ ದೇವಾಲಯದ ಆವರಣದಲ್ಲಿ ತಾಳಗುಪ್ಪ ಹೋಬಳಿ, ಮರ್ತೂರ್ ಪಂಚಾಯತಿಯ ಘಟಕ ಅಧ್ಯಕ್ಷರಾದ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಿಸಲಾಯಿತು. ಈ ಸಭೆಯಲ್ಲಿ ತಾಳಗುಪ್ಪ ಹೋಬಳಿ ಅಧ್ಯಕ್ಷರಾದ ರಾಮ ಮನೋಹರ ಕುಗ್ವೆ ಇವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಭೆಗೆ ಇದರ ಸಭಾ ಕ್ಷೇತ್ರದ ಸೊರಬ ತಾಲ್ಲೂಕು ಅಧ್ಯಕ್ಷರಾದ ಶ್ರೀಯುತ ಕಾಸರಗುಪ್ಪೆ ಅಜ್ಜಪ್ಪನವರು , ಸೊರಬ ಅಧ್ಯಕ್ಷರಾದ ಶಿವಪ್ಪ ವಕೀಲರು ಹಾಗೂ ಜೆಡಿಎಸ್ ಎಮ್ಎಲ್ಎ ನಿಯೋಜಿತ ಅಭ್ಯರ್ಥಿ ಶ್ರೀಯುತ ಬಾಸೂರು ಚಂದ್ರೇಗೌಡರು ಸೊರಬ ತಾಲ್ಲೂಕು ಉಪಾಧ್ಯಕ್ಷರಾದ ಮಂಜಿನಕಾನು ಹನುಮಂತಪ್ಪನವರು, ತಾಳಗುಪ್ಪ ಹೋಬಳಿಯ ಗೌರವಾಧ್ಯಕ್ಷರಾದ ಶ್ರೀಯುತ ಲಿಂಗರಾಜ್ ಯಾದವ್ ಅವರು ಹೋಬಳಿಯ ಜೆಡಿಎಸ್ ನ ಎಲ್ಲ ಮುಖಂಡರು ಉಪಸ್ಥಿತರಿದ್ದರು.