ಡೈಲಿ ವಾರ್ತೆ: 03/ಮೇ /2024

ಬ್ರಹ್ಮಾವರ: ಲಕ್ಷಗಟ್ಟಲೆ ಬೆಲೆ ಬಾಳುವ ಮಾಂಗಲ್ಯ ಸರವನ್ನು ವಾರಿಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಬಸ್ ಕಂಡೆಕ್ಟರ್

ಬ್ರಹ್ಮಾವರ: ಹಣದ ಆಸೆಗೆ ಏನನನು ಬೇಕಾದ್ರೂ ಮಾಡುವ ಈ ಕಾಲದಲ್ಲಿ ಬಸ್ಸಿನಲ್ಲಿ  ಸಿಕ್ಕಿದ ಸುಮಾರು 1 ಲಕ್ಷಕ್ಕಿಂತಲೂ ಹೆಚ್ಚಿಗೆ ಬೆಲೆಬಾಳುವ ಚಿನ್ನದ ಕರಿಮಣಿ ಸರವನ್ನು ವಾರಿಸುದಾರರಿಗೆ ಮರಳಿಸುವುದರ ಮೂಲಕ ಅರ್ಮಾನ್ ಮೋಟರ್ಸ್ ನ ಬಸ್ ಕಂಡೆಕ್ಟರ್ ಮುನ್ನಾ ಬ್ರಹ್ಮಾವರ ಪ್ರಾಮಾಣಿಕತೆಗೆ ಮೆರೆದಿದ್ದಾರೆ.

ಬ್ರಹ್ಮಾವರದಿಂದ ಹೊನ್ನಾಳ ಮಾರ್ಗದಲ್ಲಿ ಸಂಚರಿಸುವ ಈ ಬಸ್ಸಿನಲ್ಲಿ ಹೊನ್ನಾಳದ ರಿಕ್ಷಾ ಚಾಲಕರಾದ ಬಸವರಾಜ್ ರವರ ಪತ್ನಿ ಚಂದ್ರಕಲಾರವರ ಕರಿಮಣಿ ಸರವೂ ಬಿದ್ದು ಹೊಗಿದ್ದು ಅದೇ ಬಸ್ಸಿನಲ್ಲಿ ಕಂಡೆಕ್ಟರ್ ಆಗಿದ್ದ ಮುನ್ನಾ ಬ್ರಹ್ಮಾವರರವರಿಗೆ ಸಿಕ್ಕಿದ್ದು  ಅದನ್ನು ಅವರು ವಾರಿಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಯನ್ನು  ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಅಧ್ಯಕ್ಷರಾದ ಮುಹಮ್ಮದ್ ಗೌಸ್ ಹಾಗೂ ಇತರರು ಉಪಸ್ಥಿತರಿದ್ದರು. ಅವರ ಈ ಒಂದು ಪ್ರಾಮಾಣಿಕತೆ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.