ಡೈಲಿ ವಾರ್ತೆ : 31 ಜುಲೈ 2022

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾಗರ : – ಕೆಂಚನಾಳ ಅರಣ್ಯ ಪ್ರದೇಶದ ರೈಲ್ವೆ ನಿಲ್ದಾಣ ಬಳಿ ಭಾನುವಾರ ಬೆಳಗಿನ ಜಾವ ರೈಲು ಹಳಿಯ ಮೇಲೆ ಮರವೊಂದು ಬಿದ್ದಿದೆ.


ಈ ಘಟನೆಯಿಂದಾಗಿ ತಾಳಗುಪ್ಪ-ಬೆಂಗಳೂರು ರೈಲು ಸಾಗರ ಜಂಬಗಾರು ರೈಲು ನಿಲ್ದಾಣಕ್ಕೆ ತಡವಾಗಿ ಆಗಮಿಸಿದೆ.
ತಾಳಗುಪ್ಪ-ಬೆಂಗಳೂರು ರೈಲು ಸಾಗರಕ್ಕೆ 6.30 ಗಂಟೆಗೆ ರೈಲ್ವೆ ನಿಲ್ದಾಣಕ್ಕೆ ಬರಬೇಕಿತ್ತು,ಆದರೆ ಎರಡು ಗಂಟೆ ತಡವಾಗಿ 8.30ಕ್ಕೆ ಆಗಮಿಸಿದೆ.

ಹಾಗೂ ಸಾಗರದಿಂದ-ಮೈಸೂರಿಗೆ ಹೋಗುವ ರೈಲುಗಾಡಿ ಅರ್ದ ಗಂಟೆ ತಡವಾಗಿ ಸಂಚರಿಸಿದೆ. ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಲೇ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿ ರೈಲ್ವೆ ಹಳಿ ಮೇಲಿದ್ದ ಮರಗಳನ್ನು ದುರಸ್ತಿಗೊಳಿಸಿದರು.
ಇದೀಗ ಈ ಮಾರ್ಗದ ರೈಲುಗಳ ಸಂಚಾರಕ್ಕೆ ಮುಕ್ತಗೊಂಡಿದೆ.