ಡೈಲಿ ವಾರ್ತೆ: 30 ಅಕ್ಟೋಬರ್ 2022

ಕರ್ನಾಟಕ ದಲಿತ ವಿಮೋಚನಾ ಸಮಿತಿಯ ಅಧ್ಯಕ್ಷರಾಗಿ ಗುಂಡಗತ್ತಿ ಸುರೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ದೊಡ್ಮನಿ ಬಳಿಗನೂರು ಆಯ್ಕೆ.

ಹರಪನಹಳ್ಳಿ : ( ವಿಜಯನಗರ ಜಿಲ್ಲೆ ) :- ಕರ್ನಾಟಕ ದಲಿತ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಧ್ಯಕ್ಷರಾದ ಕೆಂಚಪ್ಪ ಮಲ್ಲಮ್ಮನವರ ನೇತೃತ್ವದಲ್ಲಿ ಹರಪನಹಳ್ಳಿ ತಾಲ್ಲೂಕು ಸಮಿತಿಯ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಮಿತಿಯಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿಯ ತಾಲ್ಲೂಕು ಅಧ್ಯಕ್ಷರಾಗಿ ಎಸ್. ಸುರೇಶ್ ಗುಂಡಗತ್ತಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ದೊಡ್ಮನಿ ಬಳಿಗನೂರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ದಲಿತ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಧ್ಯಕ್ಷರಾದ ಕೆಂಚಪ್ಪ ಮಲ್ಲಮ್ಮನವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ದಲಿತ ವಿಮೋಚನಾ ಸಮಿತಿಯ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ಪೂಜಾರ್ ನವೀನ್, ಕೋಶಾಧ್ಯಕ್ಷರಾಗಿ ಬಿ ಸುಭಾಷ್, ಸಹಕಾರ್ಯದರ್ಶಿಯಾಗಿ ಅರಸನಾಳ್ ಮಂಜುನಾಥ್, ಸಂಘನಾ ಸಂಚಾಲಕರಾಗಿ ನೀಲಗುಂದದ ಮಾಚಿಹಳ್ಳಿ ಪ್ರಕಾಶ್, ಬಳಿಗನೂರು ದೊಡ್ಮನಿ ಹನಮಂತಪ್ಪ, ಮಜ್ಜಿಗೇರಿ ಸಿಡ್ಲಪ್ಪ, ಪರಶುರಾಮ ಹುಲಿಕಟ್ಟಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಕಾರ್ಯಧ್ಯಕ್ಷರಾದ ಕೆಂಚಪ್ಪ ಮಲ್ಲಮ್ಮನವರ ಘೋಷಣೆ ಮಾಡಿದ್ದಾರೆ.


ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾಧ್ಯಕ್ಷರಾದ ಬಿ.ಟಿ ಶಾಂತರಾಜ್, ಜಿಲ್ಲಾ ಅಧ್ಯಕ್ಷರಾದ ರಾಮಜ್ಜಿ ಪರಶುರಾಮ್, ಜಿಲ್ಲಾ ಉಪಾಧ್ಯಕ್ಷರಾದ. ಆಂಜನೇಯ ಬಿ.ಟಿ, ಕಾರ್ಯದರ್ಶಿಯಾದ ಪಿ.ಆನಂದ, ಹಾಗೂ ಹುಲಿಕಟ್ಟಿ ಮಂಜುನಾಥ್, ಚಂದ್ರು, ಚಿರಂಜೀವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.