ಡೈಲಿ ವಾರ್ತೆ: 01 ನವಂಬರ್ 2022

ಹೊನ್ನಾಳದಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ

ಬ್ರಹ್ಮಾವರ : ಹೊನ್ನಾಳದ ಇತಿಹಾಸದಲ್ಲಿ ಇದೇ ಮೊದಲು ಸಲ ರಿತೇಶ್ ಪೂಜಾರಿ ಹೊನ್ನಾಳ ಇವರ ನೇತ್ರತ್ವದಲ್ಲಿ ರಿಕ್ಷಾ ಚಾಲಕ ಮಾಲಕರು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳ ಇದರ ನಿವೃತ್ತ ಮುಖ್ಯೋಪಾಧ್ಯಾಯ ಇಮಾಮ್ ಸಾಹೇಬ್ ಟಂಕಸಾಲಿ
ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.



ಕಾರ್ಯಕ್ರಮದಲ್ಲಿ ಸುರೇಶ್ ಪೂಜಾರಿ ಹೊನ್ನಾಳ ಮುಹಮ್ಮದ್ ಗೌಸ್ ನಾಗರಾಜ್ ಶೆಟ್ಟಿ ಹೊನ್ನಾಳ ಮುಹಮ್ಮದ್ ಹನೀಫ್ ಸಾಹೇಬ್ ಹೊನ್ನಾಳ ದಿನೇಶ್ ಪೂಜಾರಿ ಹೊನ್ನಾಳ ರಿಕ್ಷಾ ಚಾಲಕ ಮಾಲಕರು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿರು.
ಸುಭಾನ್ ಅಹ್ಮದ್ ಹೊನ್ನಾಳ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.
ಕಾರ್ಯಕ್ರಮದ ನಂತರ ಹೊನ್ನಾಳದ ರಾಜಬೀದಿಯಲ್ಲಿ ಬೈಕ್ ರ್‍ಯಾಲಿ ನಡೆಸಲಾಯಿತು.