ಡೈಲಿ ವಾರ್ತೆ: 01 ನವಂಬರ್ 2022

ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರ್ಕೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

ಬ್ರಹ್ಮಾವರ :”ಕನ್ನಡ ಭಾಷೆ ನಮ್ಮ ನಡೆ – ನುಡಿ ಯ ಅವಿಭಾಜ್ಯ ಅಂಗ, ಬದುಕಿನ ಜೀವಾಳ, ಸಂಸ್ಕೃತಿಯ ತಳಹದಿ ” ಎಂದು ಆಕಾಶ ವಾಣಿ ಸಂಗೀತ ಕಲಾವಿದರು, ನಿವೃತ್ತ ಶಿಕ್ಷಕರಾದ ಶ್ರೀ ಚಂದ್ರಶೇಖರ ಕೆದ್ಲಾಯ ರವರು ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ ಬಾರ್ಕೂರು ಇಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ, ತಮ್ಮ ಮಾತುಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೀತಿ ರೇಖಾರವರು ಘನ ಅಧ್ಯಕ್ಷತೆ ವಹಿಸಿ, ಉಪಸ್ಥಿತರಿದ್ದರು,
ಕನ್ನಡ ಭಾಷೆ, ಕರ್ನಾಟಕದ ಸೌಂದರ್ಯ ಕುರಿತು ವಿವಿಧ ನೃತ್ಯ ಗಳು ಶಾಲಾ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮ ವನ್ನು ವಿದ್ಯಾರ್ಥಿನಿ ಅವನಿ ನಿರೂಪಿಸಿ, ಅನುಷಾ ಸ್ವಾಗತಿಸಿ, ಪ್ರಾರ್ಥನಾ ವಂದಿಸಿದರು ಕನ್ನಡ ಶಿಕ್ಷಕರಾದ ಪೂರ್ಣೇಶ್, ಶಿಕ್ಷಕಿಯರಾದ ಅಮೃತಾ ಶೆಟ್ಟಿ , ಅಪರ್ಣಾರವರು ಸಂಯೋಜನೆ ಮಾಡಿದರು, ಶಾಲಾ ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು ಈ ಕಾರ್ಯಕ್ರಮ ದಲ್ಲಿ ಶಾಲಾ ವಿದ್ಯಾರ್ಥಿಗಳು , ಶಿಕ್ಷಕ -ಶಿಕ್ಷಕೇತರರು ಮತ್ತು ಪೋಷಕರು ಉಪಸ್ಥಿತರಿದ್ದರು.