ಡೈಲಿ ವಾರ್ತೆ:21 ಜನವರಿ 2023

ಗುಡ್ಡೆಯಂಗಡಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಆಟೋ ರಿಕ್ಷಾ

ಕುಂದಾಪುರ : ಇಲ್ಲಿನ ಪ್ರಮುಖ ರಾ.ಹೆ.ಗುಡ್ಡೆಯಂಗಡಿ ಸಮೀಪ ಚಲಿಸುತ್ತಿದ್ದ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಸಮೀಪದ ಚರಂಡಿಗೆ ಪಲ್ಟಿಯಾಗಿ ಚಾಲಕ ಅಪಾಯದಿಂದ ಪಾರಾದ ಘಟನೆ ಜ.21ರಂದು ಸಂಭವಿಸಿದೆ.

ಜನ್ನಾಡಿ ಆಟೋ ತಂಗುದಾಣದ ಅಟೋ ಚಾಲಕ ಅಶೋಕ್‌ ಎನ್ನುವವರು ಇಲ್ಲಿನ ಹುಣ್ಸೆಮಕ್ಕಿಯಲ್ಲಿ ಪ್ರಯಾಣಿಕರನ್ನು ಬಿಟ್ಟು ಬಿದ್ಕಲ್‌ಕಟ್ಟೆ ಕಡೆಗೆ ಹಿಂದಿರುಗುತ್ತಿರುವ ಸಂದರ್ಭದಲ್ಲಿ ಏಕಾಏಕಿ ದನವೊಂದು ಅಡ್ಡಲಾಗಿ ಓಡಿ ಬಂದಿದ್ದು, ಪರಿಣಾಮ ರಿಕ್ಷಾ ಚಾಲಕ ವಾಹನ ನಿಯಂತ್ರಿಸುವ ಭರದಲ್ಲಿ ಆಯಾತಪ್ಪಿ ಚರಂಡಿಗೆ ಪಲ್ಟಿಯಾಗಿದೆ.

ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್‌ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಆಟೋ ಚಾಲಕ ಅಶೋಕ್‌ ಇತ್ತೀಚೆಗಷ್ಟೇ ಹೊಸದಾಗಿ ಅಟೋ ಖರೀದಿಸಿದ್ದರು ಎಂದು ಹೇಳಲಾಗಿದೆ.