ಡೈಲಿ ವಾರ್ತೆ: 29 ಜನವರಿ 2023

ದೇವರಿಗಾಗಿ ನಾಲಗೆಯನ್ನೇ ಕತ್ತರಿಸಿಕೊಂಡ ಭಕ್ತ.!

ಬಳ್ಳಾರಿ : ದೇವರ ಅನುಗ್ರಹಕ್ಕೆ ಪಾತ್ರರಾಗಲು ಭಕ್ತರು ಅನೇಕ ವೃತ ಗಳನ್ನು ತ್ಯಾಗಗಳನ್ನು ಮಾಡುತ್ತಾರೆ ಆದರೆ ದೇವರನ್ನು ಒಲಿಸಿಕೊಳ್ಳಲು ಮುಂದಾದ ಭಕ್ತನೊಬ್ಬ ನಾಲಗೆ ಕತ್ತರಿಸಿಕೊಂಡ ಘಟನೆ ಭಾನುವಾರ ನಡೆದಿದೆ

ಸಿರುಗುಪ್ಪ ತಾಲೂಕಿನ‌ ಉಪ್ಪಾರ ಹೊಸಹಳ್ಳಿ ಗ್ರಾಮದ ವೀರೇಶ್ ಎಂಬ ವ್ಯಕ್ತಿ , ದೇವರು ನಾಲಗೆ ಕೇಳಿದೆ ಎಂದು ಚೂರಿಯಿಂದ ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಶಂಕರಪ್ಪ ತಾತನಿಗಾಗಿ ಭೂಪ ನಾಲಗೆ ಕತ್ತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದ್ದು , ಈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.