ಪ್ರಭುಲಿಂಗ, ಎಸ್, ನಂದಗೇರಿ
ಬಿಜಾಪುರ ನಗರ


ವಿಜಯಪುರ ನಗರದ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಬಸವರಾಜ ಬೊಮ್ಮಾಯಿಯವ್ರು ಐವತ್ತು ಕೋಟಿ ಹಣ ಮಂಜೂರು ಮಾಡಿದ್ದಾರೆ ಎಂದು ವಿಜಯಪುರ ನಗರ ಶಾಸಕ ಯತ್ನಾಳ ತಿಳಿಸಿದರು.

ವಿಜಯಪುರ ದಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ಇನ್ನೂ 200 ಕೋಟಿ ಹಣ ನೀಡಲಿದ್ದು ನಗರದಲ್ಲಿ ಅಭಿವೃದ್ಧಿ ಕಾರ್ಯಗಳಾಗಲಿವೆ, ಸ್ಮಾರ್ಟ್ ಸಿಟಿಯ ಲಿಸ್ಟ್ ನಲ್ಲಿ ವಿಜಯಪುರ ಜಿಲ್ಲೆ ಇರಬೇಕಾಗಿತ್ತು ಆದರೆ ದುರದೃಷ್ಟವಶಾತ್ ಇಲ್ಲಾ ಸ್ಮಾರ್ಟ್ ಸಿಟಿ ಲಿಸ್ಟ್ ನಲ್ಲಿ ವಿಜಯಪುರ ಜಿಲ್ಲೆಯನ್ನು ತರಬೇಕಾದವರು ತರಲಿಲ್ಲ ಎಂದು ಪರೋಕ್ಷವಾಗಿ ಸಂಸದ ರಮೇಶ ಜಿಗಜಿಣಗಿ ವಿರುದ್ಧ ವಾಗ್ದಾಳಿ ನಡೆಸಿದರು.