ಡೈಲಿ ವಾರ್ತೆ: 26/April/2024

ಕೋಟ: ಮತಗಟ್ಟೆಗೆ ಬಂದ ಮದುಮಕ್ಕಳು

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋಹನ್ ಸಾಲಿಯಾನ್ ರವರ ಮಗ ರಂಜಿತ್ ಸಾಲಿಯಾನ್ ಹಾಗೂ ಶಂಕರ ಕಾಂಚನ್ ರವರ ಮಗಳು ಶಾಲಿನಿ ತಮ್ಮ ವಿವಾಹವನ್ನು  ಮುಗಿಸಿ ಕಲ್ಯಾಣ ಮಂಟಪದಿಂದ ನೇರ  ಮತ ಕಟ್ಟೆಗೆ ಬಂದು ಮತ ಚಲಾಯಿಸಿದರು.

ಮದುಮಕ್ಕಳ ದಿರಿಸಿನಲ್ಲೇ ಮತ ಚಲಾಯಿಸಲು ಬಂದ ಈ ನೂತನ ಜೋಡಿಯನ್ನು ಅಲ್ಲಿ ನೆರೆದಿದ್ದವರು ನೋಡಿ ಕಣ್ ತುಂಬಿಕೊಂಡರು. ನೂತನ ಜೋಡಿಯ ಈ ಕರ್ತವ್ಯ ಪಾಲನೆಯ ಕ್ರಮವನ್ನು ಶ್ಲಾಘಿಸಿದ ಮತಗಟ್ಟೆ ಅಧಿಕಾರಿ, ಪೊಲೀಸ್ ಸಿಬಂದಿಗಳು ವಧೂವರರನ್ನು ಅಭಿನಂದಿಸಿದರು.