ಡೈಲಿ ವಾರ್ತೆ: 30 ಜನವರಿ 2023

ಮೂಡಿಗೆರೆ: ಅಸ್ಸಾಮಿ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸಂಘ ಪರಿವಾರದ ಕಾರ್ಯಕರ್ತರು: ಪ್ರಕರಣ ದಾಖಲು(ವಿಡಿಯೋ ವೈರಲ್)

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ ದನದ ಮಾಂಸ ಮಾರುತ್ತಿದ್ದ ಎಂದು ಆರೋಪಿಸಿ ಅಸ್ಸಾಮಿ ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಆರೋಪದ ಮೇಲೆ 3 ಬಜರಂಗದಳ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೂಡಿಗೆರೆ ಸಮೀಪದ ಮುದ್ರೆಮನೆ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ದನದ ಮಾಂಸ ಮಾರುತ್ತಿದ್ದ ಎಂದು ಆರೋಪಿಸಿ ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಲಾಗಿದೆ. ಆನಂತರ ನಿಂದಿಸಿ ಹಲ್ಲೆ ಮಾಡುವು ದೃಶ್ಯಗಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಥಳಿತಕ್ಕೊಳಗಾದ ಅಸ್ಸಾಮಿ ಯುವಕನ ಮೇಲೂ ಸಹ ದೂರು ದಾಖಲಾಗಿದೆ. ಯುವಕನನ್ನು ಗೋಣಿಬೀಡು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಾಂಸವನ್ನು FSL ಪರೀಕ್ಷೆಗೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ.